<p><strong>ಕಲಬುರಗಿ</strong>: ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದ ಕಾರಣ ರದ್ದುಪಡಿಸಲಾದ ಸೊಲ್ಲಾಪುರ-ಗುಂತಕಲ್ ಡೆಮು ಪ್ಯಾಸೆಂಜರ್ ರೈಲು (ಸಂಖ್ಯೆ: 71301) ಸೇವೆ ಎರಡು ವರ್ಷಗಳಾದರೂ ಪುನಃ ಆರಂಭವಾಗಿಲ್ಲ. ಕೋವಿಡ್ ದಿನಗಳಿಗೂ ಮುಂಚೆ ರದ್ದಾದ ರೈಲು ಸೇವೆ ಸದ್ಯ ಪುನರಾರಂಭ ಆಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.</p>.<p>ಸೊಲ್ಲಾಪುರದಿಂದ ನಸುಕಿನ 3.50ಕ್ಕೆ ಹೊರಡುತ್ತಿದ್ದ ಈ ರೈಲು, ಮಧ್ಯಾಹ್ನ 1ಕ್ಕೆ ಗುಂತಕಲ್ ತಲುಪುತ್ತಿತ್ತು. ಅಕ್ಕಲಕೋಟ ರೋಡ್, ಗಾಣಗಾಪುರ ರೋಡ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಸೈದಾಪುರ, ಕೃಷ್ಣ, ರಾಯಚೂರು, ಮಂತ್ರಾಲಯ ರೋಡ್, ಆದೋನಿ ಪ್ರಮುಖ ನಿಲ್ದಾಣ ಸೇರಿ 38 ನಿಲ್ದಾಣಗಳಲ್ಲಿ ನಿಲುಗಡೆ ಆಗುತಿತ್ತು. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ರೈಲು ಒಟ್ಟು 380 ಕಿ.ಮೀ. ಸಂಚರಿಸುತ್ತಿತ್ತು.</p>.<p>ಪ್ರಯಾಣ ದರ ಕಡಿಮೆ ಮತ್ತು ಈ ಮಾರ್ಗದ ಸಣ್ಣಪುಟ್ಟ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಆಗುತ್ತಿದ್ದ ಕಾರಣ ಪ್ರಯಾಣಿಕರಿಗೆ ಅನುಕೂಲಕರ ಆಗಿತ್ತು. ಗ್ರಾಮೀಣ ಜನರ ಒಡನಾಡಿ ಆಗಿತ್ತು. ಕೂಲಿಕಾರ್ಮಿಕರು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದರು. ‘ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಈ ರೈಲಿನಿಂದ ಅನುಕೂಲವಾಗಿತ್ತು. ರಾತ್ರಿ ಪಾಳಿ ಕೆಲಸ ಮಾಡುವವರಿಗೂ ಪ್ರಯೋಜನಕಾರಿ ಆಗಿತ್ತು. ಆದರೆ, ರೈಲು ರದ್ದು ಆದ ನಂತರ ದುಬಾರಿ ಹಣ ಕೊಟ್ಟು ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿಯಿದೆ. ಅವು ಕೂಡ ಸಕಾಲಕ್ಕೆ ಸಿಗುವುದಿಲ್ಲ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.</p>.<p>‘ಕಲಬುರಗಿಯಲ್ಲಿ ರಾತ್ರಿ ಸೆಕ್ಯುರಿಟಿ ಕೆಲಸ ಮಾಡುವ ನಾನು ನನ್ನೂರು ಕುಂಬಾರಹಳ್ಳಿಗೆ ಈ ರೈಲಿನಲ್ಲಿ ಹೋಗುತ್ತಿದ್ದೆ. ರೈಲಿನಲ್ಲಿ ಪ್ರಯಾಣ ದರ ₹ 35 ಇತ್ತು. ಈಗ ಬಸ್ಗೆ ₹ 65 ಕೊಟ್ಟು ಪ್ರಯಾಣಿಸಬೇಕಾದ ಸ್ಥಿತಿಯಿದೆ’ ಎಂದು ಭೀಮರಡ್ಡಿ ತಿಳಿಸಿದರು.</p>.<p>‘ಯಾದಗಿರಿ ಜಿಲ್ಲೆಯ ಬಹುತೇಕ ಜನ ರಾಯಚೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಾರೆ. ಕೋವಿಡ್ಗೂ ಮೊದಲು ಬೆಳಿಗ್ಗೆ ಹೋಗಿ, ಸಂಜೆ ಅದೇ ರೈಲಿಗೆ ಮರಳುತ್ತಿದ್ದರು. ರದ್ದು ಆಗಿದ್ದರಿಂದ ಸಮಸ್ಯೆಯಾಗಿದೆ. ಬಡಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಠಾಣಗುಂದಿ ಗ್ರಾಮದ ಉಸ್ಮಾನ್ಸಾಬ್ ಶೇಖ್ ತಿಳಿಸಿದರು.</p>.<p class="Briefhead"><strong>ಗುಂತಕಲ್–ಕಲಬುರಗಿ ರೈಲು ಕೂಡ ರದ್ದು:</strong></p>.<p>ಸೊಲ್ಲಾಪುರ–ಗುಂತಕಲ್ ರೈಲು 71302 ಸಂಖ್ಯೆ (ಗುಂತಕಲ್–ಕಲಬುರಗಿ ಡೆಮು) ಹೆಸರಿನಲ್ಲಿ ವಾಪಸ್ಸಾಗುತ್ತಿತ್ತು.ಮಧ್ಯಾಹ್ನ 1.30ಕ್ಕೆ ಆರಂಭವಾಗಿ ರಾತ್ರಿ 9.40ಕ್ಕೆ ಕಲಬುರಗಿ ತಲುಪುತ್ತಿತ್ತು. ಈ ರೈಲು ಕೂಡ ರದ್ದಾಗಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗಿದೆ. ಬೆಳಿಗ್ಗೆ ಹೋಗುವ ಜನರು ಸಂಜೆ ಇದೇ ರೈಲಿನಲ್ಲಿ ಮರಳಿ ತಮ್ಮ ಊರುಗಳನ್ನು ಸೇರುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದ ಕಾರಣ ರದ್ದುಪಡಿಸಲಾದ ಸೊಲ್ಲಾಪುರ-ಗುಂತಕಲ್ ಡೆಮು ಪ್ಯಾಸೆಂಜರ್ ರೈಲು (ಸಂಖ್ಯೆ: 71301) ಸೇವೆ ಎರಡು ವರ್ಷಗಳಾದರೂ ಪುನಃ ಆರಂಭವಾಗಿಲ್ಲ. ಕೋವಿಡ್ ದಿನಗಳಿಗೂ ಮುಂಚೆ ರದ್ದಾದ ರೈಲು ಸೇವೆ ಸದ್ಯ ಪುನರಾರಂಭ ಆಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.</p>.<p>ಸೊಲ್ಲಾಪುರದಿಂದ ನಸುಕಿನ 3.50ಕ್ಕೆ ಹೊರಡುತ್ತಿದ್ದ ಈ ರೈಲು, ಮಧ್ಯಾಹ್ನ 1ಕ್ಕೆ ಗುಂತಕಲ್ ತಲುಪುತ್ತಿತ್ತು. ಅಕ್ಕಲಕೋಟ ರೋಡ್, ಗಾಣಗಾಪುರ ರೋಡ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಸೈದಾಪುರ, ಕೃಷ್ಣ, ರಾಯಚೂರು, ಮಂತ್ರಾಲಯ ರೋಡ್, ಆದೋನಿ ಪ್ರಮುಖ ನಿಲ್ದಾಣ ಸೇರಿ 38 ನಿಲ್ದಾಣಗಳಲ್ಲಿ ನಿಲುಗಡೆ ಆಗುತಿತ್ತು. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ರೈಲು ಒಟ್ಟು 380 ಕಿ.ಮೀ. ಸಂಚರಿಸುತ್ತಿತ್ತು.</p>.<p>ಪ್ರಯಾಣ ದರ ಕಡಿಮೆ ಮತ್ತು ಈ ಮಾರ್ಗದ ಸಣ್ಣಪುಟ್ಟ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಆಗುತ್ತಿದ್ದ ಕಾರಣ ಪ್ರಯಾಣಿಕರಿಗೆ ಅನುಕೂಲಕರ ಆಗಿತ್ತು. ಗ್ರಾಮೀಣ ಜನರ ಒಡನಾಡಿ ಆಗಿತ್ತು. ಕೂಲಿಕಾರ್ಮಿಕರು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದರು. ‘ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಈ ರೈಲಿನಿಂದ ಅನುಕೂಲವಾಗಿತ್ತು. ರಾತ್ರಿ ಪಾಳಿ ಕೆಲಸ ಮಾಡುವವರಿಗೂ ಪ್ರಯೋಜನಕಾರಿ ಆಗಿತ್ತು. ಆದರೆ, ರೈಲು ರದ್ದು ಆದ ನಂತರ ದುಬಾರಿ ಹಣ ಕೊಟ್ಟು ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿಯಿದೆ. ಅವು ಕೂಡ ಸಕಾಲಕ್ಕೆ ಸಿಗುವುದಿಲ್ಲ’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.</p>.<p>‘ಕಲಬುರಗಿಯಲ್ಲಿ ರಾತ್ರಿ ಸೆಕ್ಯುರಿಟಿ ಕೆಲಸ ಮಾಡುವ ನಾನು ನನ್ನೂರು ಕುಂಬಾರಹಳ್ಳಿಗೆ ಈ ರೈಲಿನಲ್ಲಿ ಹೋಗುತ್ತಿದ್ದೆ. ರೈಲಿನಲ್ಲಿ ಪ್ರಯಾಣ ದರ ₹ 35 ಇತ್ತು. ಈಗ ಬಸ್ಗೆ ₹ 65 ಕೊಟ್ಟು ಪ್ರಯಾಣಿಸಬೇಕಾದ ಸ್ಥಿತಿಯಿದೆ’ ಎಂದು ಭೀಮರಡ್ಡಿ ತಿಳಿಸಿದರು.</p>.<p>‘ಯಾದಗಿರಿ ಜಿಲ್ಲೆಯ ಬಹುತೇಕ ಜನ ರಾಯಚೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಾರೆ. ಕೋವಿಡ್ಗೂ ಮೊದಲು ಬೆಳಿಗ್ಗೆ ಹೋಗಿ, ಸಂಜೆ ಅದೇ ರೈಲಿಗೆ ಮರಳುತ್ತಿದ್ದರು. ರದ್ದು ಆಗಿದ್ದರಿಂದ ಸಮಸ್ಯೆಯಾಗಿದೆ. ಬಡಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಠಾಣಗುಂದಿ ಗ್ರಾಮದ ಉಸ್ಮಾನ್ಸಾಬ್ ಶೇಖ್ ತಿಳಿಸಿದರು.</p>.<p class="Briefhead"><strong>ಗುಂತಕಲ್–ಕಲಬುರಗಿ ರೈಲು ಕೂಡ ರದ್ದು:</strong></p>.<p>ಸೊಲ್ಲಾಪುರ–ಗುಂತಕಲ್ ರೈಲು 71302 ಸಂಖ್ಯೆ (ಗುಂತಕಲ್–ಕಲಬುರಗಿ ಡೆಮು) ಹೆಸರಿನಲ್ಲಿ ವಾಪಸ್ಸಾಗುತ್ತಿತ್ತು.ಮಧ್ಯಾಹ್ನ 1.30ಕ್ಕೆ ಆರಂಭವಾಗಿ ರಾತ್ರಿ 9.40ಕ್ಕೆ ಕಲಬುರಗಿ ತಲುಪುತ್ತಿತ್ತು. ಈ ರೈಲು ಕೂಡ ರದ್ದಾಗಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗಿದೆ. ಬೆಳಿಗ್ಗೆ ಹೋಗುವ ಜನರು ಸಂಜೆ ಇದೇ ರೈಲಿನಲ್ಲಿ ಮರಳಿ ತಮ್ಮ ಊರುಗಳನ್ನು ಸೇರುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>