<p><strong>ಕಲಬುರಗಿ</strong>: ಕ್ರೆಡಿಟ್ ಕಾರ್ಡ್ನ ರಿವಾರ್ಡ್ ಪಾಯಿಂಟ್ ಆಸೆಗೆ ಬಲಿಯಾದ ದಂಪತಿ ₹7.85 ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.</p>.<p>ಜಗತ್ ವೃತ್ತದ ಖಾಸಗಿ ಬ್ಯಾಂಕ್ವೊಂದರ ಗ್ರಾಹಕರಾದ ಮಂಜುನಾಥ ಶಂಕ್ರೆಪ್ಪ ಹಾದಿಮನಿ ದಂಪತಿ ಮೋಸದ ಜಾಲಕ್ಕೆ ಸಿಲುಕಿ, ಕ್ರೆಡಿಟ್ ಕಾರ್ಡ್ನಿಂದ ₹7.85 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. <br><br>ಶಿವಶಕ್ತಿ ಕಾಲೊನಿ ನಿವಾಸಿ ಮಂಜುನಾಥ ಶಂಕ್ರೆಪ್ಪ ಹಾದಿಮನಿ ಅವರು ಪತ್ನಿ ಹೆಸರಿನಲ್ಲಿ ₹10.88 ಲಕ್ಷ ವರೆಗಿನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ವಂಚಿತರು ಜುಲೈ 23ರಂದು ₹5,999 ರಿವಾರ್ಡ್ ಬಂದಿದೆ ಎಂದು ಮೆಸೇಜ್ ಮೂಲಕ ಲಿಂಕ್ ಕಳುಹಿಸಿದ್ದಾರೆ. ಅದನ್ನು ನಂಬಿದ ದಂಪತಿ ಲಿಂಕ್ಗೆ ಹೋಗಿ, ಅಲ್ಲಿ ಕೇಳಿರುವ ಎಲ್ಲ ಮಾಹಿತಿ ತುಂಬಿದ್ದಾರೆ. ಅದೇ ದಿನ ಸಂಜೆ ವೇಳೆ ₹1.79 ಲಕ್ಷ, ₹1.78 ಲಕ್ಷ, ₹75 ಸಾವಿರ, ₹1.80 ಲಕ್ಷ, ₹1.85 ಲಕ್ಷ ಸೇರಿ ಒಟ್ಟು ₹7.85 ಲಕ್ಷ ಕಡಿತ ಮಾಡಿಕೊಂಡಿದ್ದಾರೆ. ಅನುಮಾನದಿಂದ ಬ್ಯಾಂಕ್ಗೆ ತೆರಳಿ, ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ತಿಳಿಸಿದ್ದಾರೆ. ವಿಚಾರಣೆಯ ಬಳಿಕ ಮೋಸ ಹೋಗಿದ್ದು ಗೋತ್ತಾಗಿದೆ. ಬಳಿಕ ‘ಸೆನ್’ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಕ್ರೆಡಿಟ್ ಕಾರ್ಡ್ನ ರಿವಾರ್ಡ್ ಪಾಯಿಂಟ್ ಆಸೆಗೆ ಬಲಿಯಾದ ದಂಪತಿ ₹7.85 ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.</p>.<p>ಜಗತ್ ವೃತ್ತದ ಖಾಸಗಿ ಬ್ಯಾಂಕ್ವೊಂದರ ಗ್ರಾಹಕರಾದ ಮಂಜುನಾಥ ಶಂಕ್ರೆಪ್ಪ ಹಾದಿಮನಿ ದಂಪತಿ ಮೋಸದ ಜಾಲಕ್ಕೆ ಸಿಲುಕಿ, ಕ್ರೆಡಿಟ್ ಕಾರ್ಡ್ನಿಂದ ₹7.85 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. <br><br>ಶಿವಶಕ್ತಿ ಕಾಲೊನಿ ನಿವಾಸಿ ಮಂಜುನಾಥ ಶಂಕ್ರೆಪ್ಪ ಹಾದಿಮನಿ ಅವರು ಪತ್ನಿ ಹೆಸರಿನಲ್ಲಿ ₹10.88 ಲಕ್ಷ ವರೆಗಿನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ವಂಚಿತರು ಜುಲೈ 23ರಂದು ₹5,999 ರಿವಾರ್ಡ್ ಬಂದಿದೆ ಎಂದು ಮೆಸೇಜ್ ಮೂಲಕ ಲಿಂಕ್ ಕಳುಹಿಸಿದ್ದಾರೆ. ಅದನ್ನು ನಂಬಿದ ದಂಪತಿ ಲಿಂಕ್ಗೆ ಹೋಗಿ, ಅಲ್ಲಿ ಕೇಳಿರುವ ಎಲ್ಲ ಮಾಹಿತಿ ತುಂಬಿದ್ದಾರೆ. ಅದೇ ದಿನ ಸಂಜೆ ವೇಳೆ ₹1.79 ಲಕ್ಷ, ₹1.78 ಲಕ್ಷ, ₹75 ಸಾವಿರ, ₹1.80 ಲಕ್ಷ, ₹1.85 ಲಕ್ಷ ಸೇರಿ ಒಟ್ಟು ₹7.85 ಲಕ್ಷ ಕಡಿತ ಮಾಡಿಕೊಂಡಿದ್ದಾರೆ. ಅನುಮಾನದಿಂದ ಬ್ಯಾಂಕ್ಗೆ ತೆರಳಿ, ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ತಿಳಿಸಿದ್ದಾರೆ. ವಿಚಾರಣೆಯ ಬಳಿಕ ಮೋಸ ಹೋಗಿದ್ದು ಗೋತ್ತಾಗಿದೆ. ಬಳಿಕ ‘ಸೆನ್’ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>