ದೌಡಾಯಿಸಿದ ಜನರು: ಘಟನೆಯ ಮಾಹಿತಿ ಪಡೆಯುತ್ತಿದ್ದಂತೆಯೇ ವಾರ್ಡ್ನಲ್ಲಿರುವ ತಮ್ಮ ಸಂಬಂಧಿಗಳ ಏನಾಗಿದೆ ಎಂಬ ದುಗುಡದಿಂದ ಹತ್ತಾರು ಜನರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಬಂದರು. ಇವರನ್ನು ನಿಯಂತ್ರಿಸಲು ಡಿಸಿಪಿ ಶ್ರೀಕಾಂತ ಕಟ್ಟಿಮನಿ, ಬ್ರಹ್ಮಪುರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕಪಿಲದೇವ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಯಿತು.