ದತ್ತಮಂದಿರ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ದತ್ತಾತ್ರೇಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಠೋಡ ಅವರು ದೇವಲ ಗಾಣಗಾಪುರ ಠಾಣೆಗೆ ದೂರು ನೀಡಿದ್ದು, ‘ದತ್ತಾತ್ರೇಯ ದೇವಸ್ಥಾನದ ಅಧಿಕೃತ ವೆಬ್ಸೈಟ್ (www.devalganagapur.com) ಹೊರತುಪಡಿಸಿ ದತ್ತಾತ್ರೇಯ ದೇವಸ್ಥಾನದ ಹೆಸರಿನಲ್ಲಿ ಅನಧಿಕೃತ ವೆಬ್ಸೈಟ್ ತೆರೆದುಕೊಂಡು ವಲ್ಲಭ ದಿನಕರ ಭಟ್ಟ ಪೂಜಾರಿ, ಅಂಕುರ ಆನಂದರಾವ ಪೂಜಾರಿ, ಪ್ರತೀಕ ಸದಾಶಿವ ಪೂಜಾರಿ, ಗಂಗಾಧರ ಶ್ರೀಕಾಂತ ಭಟ್ಟ ಪೂಜಾರಿ, ಶರತ್ ಭಟ್ಟ ನಂದು ಭಟ್ಟ ಪೂಜಾರಿ ಸೇರಿದಂತೆ ಇತರ ಅರ್ಚಕರ ವಿರುದ್ಧ ತನಿಖೆ ನಡೆಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.