‘ಘೋಷಣೆ ಕೂಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಮೇಲ್ನೋಟಕ್ಕೆ ಸಾಬೀತು ಆಗಿದೆ. ದೇಶದ ಎಲ್ಲಾ ನಿವಾಸಿಗಳು ಪಕ್ಷಾತೀತವಾಗಿ ದೇಶ ದ್ರೋಹಿಗಳ ಕೃತ್ಯವನ್ನು ಖಂಡಿಸಬೇಕು. ಇದರಲ್ಲಿ ತುಷ್ಟೀಕರಣ ಮಾಡುವ ಪ್ರಶ್ನೆಯೇ ಇಲ್ಲ. ದೇಶ ದ್ರೋಹಿಗಳ ಮೇಲೆ ಖಡಕ್ಕಾದ ಕಾನೂನು ಚಲಾವಣೆ ಮಾಡಿ, ತನಿಖೆಗೆ ಒಳಪಡಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.