<p><strong>ಕಲಬುರ್ಗಿ: </strong>ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಾಜಗೃಹ ನಿವಾಸದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಯ ಸವೇರಾ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>‘ಇಂಥ ವಿಕೃತ ಘಟನೆಗಳು ಭಾರತ ದೇಶದಲ್ಲಿ ಮಾತ್ರ ಸಾಧ್ಯ. ದೇಶವನ್ನು ರಕ್ಷಿಸುವ ಸಂವಿಧಾನವನ್ನು ಬರೆದ ಸಂವಿಧಾನಶಿಲ್ಪಿ ವಾಸವಿದ್ದ ಮನೆಗೆ ರಕ್ಷಣೆ ಇಲ್ಲವೆಂದರೆ ಈ ದೇಶದ ಸಾಮಾಜಿಕ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಏನು ಹೇಳುವುದು? ಹಲವು ವರ್ಷಗಳಿಂದ ಇಂಥ ಸಂಘಟಿತ ದಾಳಿಗಳು ಮರುಕಳಿಸುತ್ತಿವೆ. ಇಂಥ ಘಟನೆಗಳು ರಾಷ್ಟ್ರದ್ರೋಹದ ಪ್ರಕಾರಗಳೆಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆಯ ಅಧ್ಯಕ್ಷ ಮೋದಿನ ಪಟೇಲ್ ಅಣಬಿ ಒತ್ತಾಯಿಸಿದರು.</p>.<p>ಸಲೀಂ ಅಹ್ಮದ್ ಚಿತ್ತಾಪುರ, ಶೇಕ್ ಯುನೂಸ್ ಅಲಿ, ಸೈಯದ್ ಏಜಾಜ್ ಅಲಿ ಇನಾಂದಾರ, ಸಾದಿಕ್ ಪಟೇಲ್ ಯಳವಂತಗಿ, ಬಾಬಾ ಫಕ್ರುದ್ದಿನ್, ಗೀತಾ ಮುದಗಲ್, ಸಂಗೀತಾ ಪಾಟೀಲ್, ರಾಬಿಯಾ ಶಿಕಾರಿ, ವಿಜಯಕುಮಾರ್, ಮುಬೀನ್ ಅನ್ಸಾರಿ, ಇಲಾಹಿ ಪಟೇಲ್ ಕುಳಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಾಜಗೃಹ ನಿವಾಸದ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಯ ಸವೇರಾ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>‘ಇಂಥ ವಿಕೃತ ಘಟನೆಗಳು ಭಾರತ ದೇಶದಲ್ಲಿ ಮಾತ್ರ ಸಾಧ್ಯ. ದೇಶವನ್ನು ರಕ್ಷಿಸುವ ಸಂವಿಧಾನವನ್ನು ಬರೆದ ಸಂವಿಧಾನಶಿಲ್ಪಿ ವಾಸವಿದ್ದ ಮನೆಗೆ ರಕ್ಷಣೆ ಇಲ್ಲವೆಂದರೆ ಈ ದೇಶದ ಸಾಮಾಜಿಕ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಏನು ಹೇಳುವುದು? ಹಲವು ವರ್ಷಗಳಿಂದ ಇಂಥ ಸಂಘಟಿತ ದಾಳಿಗಳು ಮರುಕಳಿಸುತ್ತಿವೆ. ಇಂಥ ಘಟನೆಗಳು ರಾಷ್ಟ್ರದ್ರೋಹದ ಪ್ರಕಾರಗಳೆಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂಘಟನೆಯ ಅಧ್ಯಕ್ಷ ಮೋದಿನ ಪಟೇಲ್ ಅಣಬಿ ಒತ್ತಾಯಿಸಿದರು.</p>.<p>ಸಲೀಂ ಅಹ್ಮದ್ ಚಿತ್ತಾಪುರ, ಶೇಕ್ ಯುನೂಸ್ ಅಲಿ, ಸೈಯದ್ ಏಜಾಜ್ ಅಲಿ ಇನಾಂದಾರ, ಸಾದಿಕ್ ಪಟೇಲ್ ಯಳವಂತಗಿ, ಬಾಬಾ ಫಕ್ರುದ್ದಿನ್, ಗೀತಾ ಮುದಗಲ್, ಸಂಗೀತಾ ಪಾಟೀಲ್, ರಾಬಿಯಾ ಶಿಕಾರಿ, ವಿಜಯಕುಮಾರ್, ಮುಬೀನ್ ಅನ್ಸಾರಿ, ಇಲಾಹಿ ಪಟೇಲ್ ಕುಳಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>