ತಾಜಸುಲ್ತಾನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಯದ್ ಚಿಂಚೋಳಿ, ಚಿತ್ತಾಪುರ ತಾಲ್ಲೂಕು ಮಾಲಗತ್ತಿ, ಶಂಕರವಾಡಿ, ಹಾಗರಗಾ, ನಿಪ್ಪಾಣಿ, ಹೆಬ್ಬಾಳ, ಭೂಪಾಲತೆಗನೂರ, ಅಫಜಲಪುರ ತಾಲ್ಲೂಕು ಕೋಗನೂರ, ಕುಮಸಿ, ಗಣಜಲಖೇಡ, ಆಳಂದ ತಾಲ್ಲೂಕು ತಲೆಕೊಣೆ, ತೆಲ್ಲೂರ, ಕೆರೆ ಅಂಬಲಗಾ ಗ್ರಾಮಗಳಲ್ಲಿನ ಜನರಿಗೆ ಕೂಡಲೇ ಕೆಲಸ ಕೊಡಬೇಕು. ಜಾಬ್ ಕಾರ್ಡ್ ನೀಡುವಲ್ಲಿನ ವಿಳಂಬ ತಪ್ಪಿಸಬೇಕು. ಬಾಕಿ ಕೂಲಿಯನ್ನು ಪಾವತಿಸಬೇಕು. ಕಾಯಕ ಬಂಧುಗಳ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.