<p><strong>ಕಲಬುರಗಿ:</strong> ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾದ ಪ್ರಭು ಶರಣಪ್ಪ ಅವರನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು.</p>.<p>ಇಲ್ಲಿನ ಎಂ.ಎಸ್.ಇರಾನಿ ಪದವಿ ಕಾಲೇಜಿನಲ್ಲಿ ತೆರೆದ ಪರೀಕ್ಷಾ ಕೇಂದ್ರದಲ್ಲಿ ಪ್ರಭು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೋಣೆಯ ಪಕ್ಕದಲ್ಲಿಯೇ ಇರುವ ಹೂವಿನ ಕುಂಡದಲ್ಲಿ, ಪರೀಕ್ಷೆಯ ಹಿಂದಿನ ದಿನವೇ (2021 ಅಕ್ಟೋಬರ್ 2) ಬ್ಲೂಟೂತ್ ಡಿವೈಸ್ ಇಟ್ಟು ಬಂದಿದ್ದರು.</p>.<p>ಪರೀಕ್ಷೆಯ ದಿನ ತಪಾಸಣೆ ಮಾಡುತ್ತಾರೆ. ಆಗ ಮೆಟಲ್ ಡಿಟೆಕ್ಟರ್ನಲ್ಲಿ ಡಿವೈಸರ್ ಪತ್ತೆಯಾಗುತ್ತದೆ ಎಂಬ ಕಾರಣಕ್ಕೆ, ಅದನ್ನು ಹಿಂದಿನ ದಿನವೇ ಹೂವಿನ ಕುಂಡದಲ್ಲಿ ಇಟ್ಟು ಬಂದಿದ್ದಾರೆ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ.</p>.<p>ಈ ಹೂವಿನ ಕುಂಡ ಪರೀಕ್ಷಾ ಕೋಣೆಯಿಂದ 20 ಮೀಟರ್ ದೂರದಲ್ಲಿ ಇತ್ತು. ಅಲ್ಲಿ ಇಟ್ಟುಬಂದಿದ್ದ ಎಲೆಕ್ಟ್ರಾನಿಕ್ ಉಪಕರಣವನ್ನು ಪರೀಕ್ಷಾ ದಿನ ಎತ್ತಿಕೊಂಡು ಒಳ ಉಡುಪಿಯಲ್ಲಿ ಇಟ್ಟುಕೊಂಡಿದ್ದರು. ಕಿವಿಯಲ್ಲಿ ಸಣ್ಣ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆ ಬರೆದಿದ್ದಾಗಿ, ಆರೋಪಿ ಮಹಜರ ವೇಳೆ ಒಪ್ಪಿಕೊಂಡರು.</p>.<p>ಈ ಕಾಲೇಜಿನಲ್ಲಿರುವ ಕಂಪ್ಯೂಟರ್ ಕೋಣೆಯಲ್ಲಿ ಪ್ರಭು ಹಾಲ್ ಟಿಕೆಟ್ ನಂಬರ್ ಬಂದಿತ್ತು. ಸ್ಥಳಕ್ಕೆ ಕರೆತಂದ ಪೊಲೀಸರಿಗೆ ಪ್ರಭು ಪ್ರತಿಯೊಂದು ಸ್ಥಳವನ್ನು ತೋರಿಸಿ, ಹೇಗೆ ವಾಮಮಾರ್ಗದಿಂದ ಪರೀಕ್ಷೆ ಪಾಸಾದೆ ಎಂಬುದನ್ನು ವಿವರಿಸಿದರು.</p>.<p><strong>ನಿವೇಶನ ಮಾರಿ ಹಣ ಕೊಟ್ಟಿದ್ದ ತಂದೆ:</strong>ಹೇಗಾದರೂ ಮಾಡಿ ಮಗನನ್ನು ಪಿಎಸ್ಐ ಮಾಡಬೇಕು ಎಂಬ ಹಂಬಲದಿಂದ, ಪ್ರಭು ಅವರ ತಂದೆ ಶರಣಪ್ಪ ₹ 50 ಲಕ್ಷ ಹಣ ನೀಡಿದ್ದಾರೆ. ಹಣ ಹೊಂದಿಸಲು ನಗರದಲ್ಲಿದ್ದ ತಮ್ಮ ನಿವೇಶನ ಮಾರಾಟ ಮಾಡಿದ್ದಾರೆ. ಪರೀಕ್ಷೆಗೂ ಮುನ್ನ ₹ 20 ಲಕ್ಷ, ಫಲಿತಾಂಶ ಬಂದ ಮೇಲೆ ₹ 30 ಲಕ್ಷ ನೀಡಿದ್ದಾಗಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.</p>.<p>ಈ ಅಕ್ರಮ ಎಸಗಿದ ಆರೋಪದಡಿ ಮಗನೊಂದಿಗೆ ಶರಣಪ್ಪ ಕೂಡ ಬಂಧಿತರಾಗಿದ್ದಾರೆ.</p>.<p><strong>ರುದ್ರಗೌಡ ಜತೆ ಸಂಪರ್ಕ ಹೇಗೆ ಬಂತು?:</strong></p>.<p>ಶರಣಪ್ಪ ಅವರು ಹಲವು ವರ್ಷಗಳಿಂದ ನಗರದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪೂರೈಸುವ ವ್ಯಾಪಾರ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರಿನಲ್ಲಿ ಚಂದ್ರಕಾಂತ ಕುಲಕರ್ಣಿ ಹೊಸ ಮನೆ ಕಟ್ಟುತ್ತಿದ್ದರು. ಈ ವೇಳೆ ಶರಣಪ್ಪ ಹಾಗೂ ಚಂದ್ರಕಾಂತಗೆ ಪರಿಚಯ ಆಗಿತ್ತು.</p>.<p>ಮಗನನ್ನು ಪಿಎಸ್ಐ ಮಾಡುವ ವಿಚಾರವನ್ನು ಶರಣಪ್ಪ ಅವರು ಚಂದ್ರಕಾಂತ ಮುಂದೆ ಹೇಳಿದ್ದರು. ಇನ್ನೊಂದೆಡೆ ಚಂದ್ರಕಾಂತ ಹಾಗೂ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಮೊದಲಿನಿಂದಲೂ ಪರಿಚಯಸ್ಧರು. ಹೀಗಾಗಿ ರುದ್ರಗೌಡ ಪಾಟೀಲ ಅವರನ್ನು ಚಂದ್ರಕಾಂತ ಶರಣಪ್ಪನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಮೂವರೂ ಮಾತನಾಡಿಕೊಂಡು ₹50 ಲಕ್ಷಕ್ಕೆ ಡೀಲ್ ಮಾಡಿದ್ದರು ಎಂಬುದು ಅಧಿಕಾರಿಗಳ ಮಾಹಿತಿ.</p>.<p><strong></strong>ಸ್ಟೇಷನ್ ಬಜಾರ್ ಠಾಣೆ ಸಿಪಿಐ ಸಿದ್ದರಾಮೇಶ ಗಡೇದ ನೇತೃತ್ವದಲ್ಲಿ ಮಹಜರು ನಡೆಯಿತು.</p>.<p>ಇದನ್ನೂ ಓದಿ.. <a href="https://www.prajavani.net/karnataka-news/psi-recruitment-three-arrested-and-fir-registered-against-four-in-kalaburagi-933667.html"><strong>ಪಿಎಸ್ಐ ನೇಮಕಾತಿ ಅಕ್ರಮ: ಮತ್ತೆ ಮೂವರು ವಶಕ್ಕೆ, ನಾಲ್ವರ ವಿರುದ್ಧ ಎಫ್ಐಆರ್</strong></a><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾದ ಪ್ರಭು ಶರಣಪ್ಪ ಅವರನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು.</p>.<p>ಇಲ್ಲಿನ ಎಂ.ಎಸ್.ಇರಾನಿ ಪದವಿ ಕಾಲೇಜಿನಲ್ಲಿ ತೆರೆದ ಪರೀಕ್ಷಾ ಕೇಂದ್ರದಲ್ಲಿ ಪ್ರಭು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೋಣೆಯ ಪಕ್ಕದಲ್ಲಿಯೇ ಇರುವ ಹೂವಿನ ಕುಂಡದಲ್ಲಿ, ಪರೀಕ್ಷೆಯ ಹಿಂದಿನ ದಿನವೇ (2021 ಅಕ್ಟೋಬರ್ 2) ಬ್ಲೂಟೂತ್ ಡಿವೈಸ್ ಇಟ್ಟು ಬಂದಿದ್ದರು.</p>.<p>ಪರೀಕ್ಷೆಯ ದಿನ ತಪಾಸಣೆ ಮಾಡುತ್ತಾರೆ. ಆಗ ಮೆಟಲ್ ಡಿಟೆಕ್ಟರ್ನಲ್ಲಿ ಡಿವೈಸರ್ ಪತ್ತೆಯಾಗುತ್ತದೆ ಎಂಬ ಕಾರಣಕ್ಕೆ, ಅದನ್ನು ಹಿಂದಿನ ದಿನವೇ ಹೂವಿನ ಕುಂಡದಲ್ಲಿ ಇಟ್ಟು ಬಂದಿದ್ದಾರೆ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ.</p>.<p>ಈ ಹೂವಿನ ಕುಂಡ ಪರೀಕ್ಷಾ ಕೋಣೆಯಿಂದ 20 ಮೀಟರ್ ದೂರದಲ್ಲಿ ಇತ್ತು. ಅಲ್ಲಿ ಇಟ್ಟುಬಂದಿದ್ದ ಎಲೆಕ್ಟ್ರಾನಿಕ್ ಉಪಕರಣವನ್ನು ಪರೀಕ್ಷಾ ದಿನ ಎತ್ತಿಕೊಂಡು ಒಳ ಉಡುಪಿಯಲ್ಲಿ ಇಟ್ಟುಕೊಂಡಿದ್ದರು. ಕಿವಿಯಲ್ಲಿ ಸಣ್ಣ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆ ಬರೆದಿದ್ದಾಗಿ, ಆರೋಪಿ ಮಹಜರ ವೇಳೆ ಒಪ್ಪಿಕೊಂಡರು.</p>.<p>ಈ ಕಾಲೇಜಿನಲ್ಲಿರುವ ಕಂಪ್ಯೂಟರ್ ಕೋಣೆಯಲ್ಲಿ ಪ್ರಭು ಹಾಲ್ ಟಿಕೆಟ್ ನಂಬರ್ ಬಂದಿತ್ತು. ಸ್ಥಳಕ್ಕೆ ಕರೆತಂದ ಪೊಲೀಸರಿಗೆ ಪ್ರಭು ಪ್ರತಿಯೊಂದು ಸ್ಥಳವನ್ನು ತೋರಿಸಿ, ಹೇಗೆ ವಾಮಮಾರ್ಗದಿಂದ ಪರೀಕ್ಷೆ ಪಾಸಾದೆ ಎಂಬುದನ್ನು ವಿವರಿಸಿದರು.</p>.<p><strong>ನಿವೇಶನ ಮಾರಿ ಹಣ ಕೊಟ್ಟಿದ್ದ ತಂದೆ:</strong>ಹೇಗಾದರೂ ಮಾಡಿ ಮಗನನ್ನು ಪಿಎಸ್ಐ ಮಾಡಬೇಕು ಎಂಬ ಹಂಬಲದಿಂದ, ಪ್ರಭು ಅವರ ತಂದೆ ಶರಣಪ್ಪ ₹ 50 ಲಕ್ಷ ಹಣ ನೀಡಿದ್ದಾರೆ. ಹಣ ಹೊಂದಿಸಲು ನಗರದಲ್ಲಿದ್ದ ತಮ್ಮ ನಿವೇಶನ ಮಾರಾಟ ಮಾಡಿದ್ದಾರೆ. ಪರೀಕ್ಷೆಗೂ ಮುನ್ನ ₹ 20 ಲಕ್ಷ, ಫಲಿತಾಂಶ ಬಂದ ಮೇಲೆ ₹ 30 ಲಕ್ಷ ನೀಡಿದ್ದಾಗಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.</p>.<p>ಈ ಅಕ್ರಮ ಎಸಗಿದ ಆರೋಪದಡಿ ಮಗನೊಂದಿಗೆ ಶರಣಪ್ಪ ಕೂಡ ಬಂಧಿತರಾಗಿದ್ದಾರೆ.</p>.<p><strong>ರುದ್ರಗೌಡ ಜತೆ ಸಂಪರ್ಕ ಹೇಗೆ ಬಂತು?:</strong></p>.<p>ಶರಣಪ್ಪ ಅವರು ಹಲವು ವರ್ಷಗಳಿಂದ ನಗರದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪೂರೈಸುವ ವ್ಯಾಪಾರ ಮಾಡುತ್ತಿದ್ದರು. ಕಳೆದ ಸೆಪ್ಟೆಂಬರಿನಲ್ಲಿ ಚಂದ್ರಕಾಂತ ಕುಲಕರ್ಣಿ ಹೊಸ ಮನೆ ಕಟ್ಟುತ್ತಿದ್ದರು. ಈ ವೇಳೆ ಶರಣಪ್ಪ ಹಾಗೂ ಚಂದ್ರಕಾಂತಗೆ ಪರಿಚಯ ಆಗಿತ್ತು.</p>.<p>ಮಗನನ್ನು ಪಿಎಸ್ಐ ಮಾಡುವ ವಿಚಾರವನ್ನು ಶರಣಪ್ಪ ಅವರು ಚಂದ್ರಕಾಂತ ಮುಂದೆ ಹೇಳಿದ್ದರು. ಇನ್ನೊಂದೆಡೆ ಚಂದ್ರಕಾಂತ ಹಾಗೂ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಮೊದಲಿನಿಂದಲೂ ಪರಿಚಯಸ್ಧರು. ಹೀಗಾಗಿ ರುದ್ರಗೌಡ ಪಾಟೀಲ ಅವರನ್ನು ಚಂದ್ರಕಾಂತ ಶರಣಪ್ಪನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಮೂವರೂ ಮಾತನಾಡಿಕೊಂಡು ₹50 ಲಕ್ಷಕ್ಕೆ ಡೀಲ್ ಮಾಡಿದ್ದರು ಎಂಬುದು ಅಧಿಕಾರಿಗಳ ಮಾಹಿತಿ.</p>.<p><strong></strong>ಸ್ಟೇಷನ್ ಬಜಾರ್ ಠಾಣೆ ಸಿಪಿಐ ಸಿದ್ದರಾಮೇಶ ಗಡೇದ ನೇತೃತ್ವದಲ್ಲಿ ಮಹಜರು ನಡೆಯಿತು.</p>.<p>ಇದನ್ನೂ ಓದಿ.. <a href="https://www.prajavani.net/karnataka-news/psi-recruitment-three-arrested-and-fir-registered-against-four-in-kalaburagi-933667.html"><strong>ಪಿಎಸ್ಐ ನೇಮಕಾತಿ ಅಕ್ರಮ: ಮತ್ತೆ ಮೂವರು ವಶಕ್ಕೆ, ನಾಲ್ವರ ವಿರುದ್ಧ ಎಫ್ಐಆರ್</strong></a><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>