ಮೇ 4ರಂದು ಪ್ರಿಯಾಂಕ್ ಅವರಿಗೆ ನೋಟಿಸ್ ನೀಡಿದ್ದ ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ಪಿ, ‘ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದ ಆಡಿಯೊ ಬಗ್ಗೆ 25ರಂದು ಸಿಐಡಿ ಕಚೇರಿಗೆ ಹಾಜರಾಗಿ ವಿವರ ನೀಡುವಂತೆ ಕೇಳಲಾಗಿತ್ತು. ಆದರೆ, 28ರಂದು ತಾವು ಉತ್ತರವನ್ನು ಸಲ್ಲಿಸಿದ್ದು, ಅಲ್ಲಿ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡು ಬಂದಿವೆ’ ಎಂದಿದ್ದರು.