ಕಾರ್ಯಕರ್ತರು ಜೈಕಾರದೊಂದಿಗೆ ಆರ್. ಅಶೋಕ ಅವರನ್ನು ಸ್ವಾಗತಿಸಿದರು. ಶಾಲು ಹಾಕಿ ಬರಮಾಡಿಕೊಂಡು, ಕಾರ್ಯಕರ್ತರೊಬ್ಬರು ಅಶೋಕ ಅವರಿಗೆ ಹಾರ ಹಾಕಲು ಮುಂದಾದರು. ಆ ಹಾರ ತಮ್ಮ ಕೈಯಲ್ಲಿ ತೆಗೆದುಕೊಂಡು ಹಿರಿಯ ಮುಖಂಡ ಡಾ. ವಿಶ್ವನಾಥ್ ಪವಾರ್ ಅವರಿಗೆ ಹಾಕಿದರು. ಈ ವೇಳೆ ವಿಶ್ವನಾಥ ಅವರು ಅಶೋಕ ಅವರಿಗೆ ಕುಂಕುಮದ ತಿಲಕ ಹಚ್ಚಲು ಮುಂದಾದರು. ತಲೆಯನ್ನು ಹಿಂದಕ್ಕೆ ತೆಗೆದುಕೊಂಡ ಅಶೋಕ, ಬೇಡವೆಂದು ಕೈಯಿಂದ ತಡೆದು ತಿಲಕ ಹಚ್ಚಿಕೊಳ್ಳಲು ನಿರಾಕರಿಸಿದ್ದು ಕಂಡುಬಂತು.