ಕೊರೊನಾ ನಿಯಂತ್ರಣಕ್ಕಾಗಿ ನಗರವನ್ನು ಲಾಕ್ಡೌನ್ ಮಾಡಿದಾಗಿನಿಂದ ನೂರಾರು ವ್ಯಾಪಾರಿಗಳು ತಮ್ಮ ಗೂಡಂಗಡಿಗಳನ್ನು ಬಂದ್ ಮಾಡಿ ರಸ್ತೆ ಪಕ್ಕದಲ್ಲಿ ಬಿಟ್ಟುಹೋದರು. ಈಗ ಲಾಕ್ಡೌನ್ ಮುಗಿದ ಮೇಲೂ ಇವುಗಳು ಅಲ್ಲೇ ಇವೆ. ಅದರಲ್ಲೂ ವಿದ್ಯಾನಗರದ ಬಸವೇಶ್ವರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಹಲವು ಅಂಗಡಿಗಳು ಫುಟ್ಪಾತ್ ಮೇಲೆ ಇವೆ. ಇದರಿಂದ ಆಸ್ಪತ್ರೆ, ಬಸ್ ನಿಲ್ದಾಣಗಳಿಗೆ ಬರುವವರಿಗೆ ಕಷ್ಟವಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.