<p><strong>ಕಲಬುರಗಿ:</strong> ಕಲ್ಯಾಣ ಕರ್ನಾಟಕ ಭಾಗದ ಹಲವು ವರ್ಷಗಳ ಬೇಡಿಕೆಯಾಗಿದ್ದ ಕರ್ನಾಟಕ ಮಾಹಿತಿ ಆಯೋಗದ ಪೀಠ ನಗರದಲ್ಲಿ ಸೋಮವಾರ ಆರಂಭಗೊಂಡಿದೆ. </p>.<p>ಇಲ್ಲಿನ ರೈಲು ನಿಲ್ದಾಣದ ಬಳಿ ಇರುವ ಮಹಲ್–ಇ–ಶಾಹಿ ಅತಿಥಿಗೃಹದ ಆವರಣದಲ್ಲಿ ಹಳೆಯ ಅತಿಥಿಗೃಹವನ್ನು ಆಯೋಗಕ್ಕೆ ನೀಡಲಾಗಿದ್ದು, ಅದಕ್ಕೆ ಸುಣ್ಣ ಬಣ್ಣ ಬಳಿದು ನವೀಕರಿಸಲಾಗಿದೆ. ಆಯೋಗದ ಪೀಠ ಕಾರ್ಯಾರಂಭದ ಮೊದಲ ದಿನವಾದ ಸೋಮವಾರ ಆಯೋಗದ ಅಧಿಕಾರಿಗಳು ಭೇಟಿ ನೀಡಿದರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪಾರ್ಕಿಂಗ್, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಇನ್ನಷ್ಟೇ ಕಲ್ಪಿಸಬೇಕಿದೆ. ಪೀಠದ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಸೋಮವಾರವೂ ನಡೆದಿತ್ತು.</p>.<p>ಕಲಬುರಗಿ ಪೀಠದ ಮಾಹಿತಿ ಆಯುಕ್ತರನ್ನಾಗಿ ರವೀಂದ್ರ ಗುರುನಾಥ ಡಾಕಪ್ಪ ಅವರನ್ನು ನೇಮಕ ಮಾಡಲಾಗಿದೆ. ಆಯೋಗದ ಪೀಠವನ್ನು ಪಬ್ಲಿಕ್ ಗಾರ್ಡನ್ ಬಳಿ ಇರುವ ಹಳೆಯ ಲೋಕೋಪಯೋಗಿ ಕಚೇರಿಯ ಕಟ್ಟಡದಲ್ಲಿ ಆರಂಭಿಸುವ ಪ್ರಸ್ತಾವ ಇತ್ತು. ಅಂತಿಮವಾಗಿ ಮಹಲ್ –ಇ –ಶಾಹಿ ಅತಿಥಿಗೃಹದ ಆವರಣದಲ್ಲಿ ಆರಂಭಿಸಲಾಗಿದೆ. </p>.<p>‘ಮಹಲ್ –ಇ– ಶಾಹಿಯಲ್ಲಿ ಆಯೋಗದ ಪೀಠವನ್ನು ಆರಂಭಿಸಿರುವುದರಿಂದ ಪ್ರಕರಣಗಳ ವಿಚಾರಣೆಗಾಗಿ ಬರುವ ದೂರುದಾರರಿಗೆ ತೊಂದರೆಯಾಗಲಿದೆ. ಜನರಿಗೆ ತಕ್ಷಣ ಬರಲು ಸಾಧ್ಯವಾಗುವ ಸ್ಥಳದಲ್ಲಿ ಪೀಠದ ಕಚೇರಿ ಆರಂಭಿಸಬೇಕಿತ್ತು‘ ಎಂದು ಹೈಕೋರ್ಟ್ ವಕೀಲ <br>ಪಿ. ವಿಲಾಸಕುಮಾರ್ ಒತ್ತಾಯಿಸಿದ್ದಾರೆ.</p>.<p> <strong>3 ದಿನ ವಿಚಾರಣೆ ರದ್ದು:</strong></p><p>ಜನವರಿ 2ರಿಂದ 4ರವರೆಗೆ ಮಾಹಿತಿ ಆಯೋಗದ ಮುಂದೆ ನಿಗದಿಪಡಿಸಿದ್ದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ ಎಂದು ಆಯೋಗದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಕಲ್ಯಾಣ ಕರ್ನಾಟಕ ಭಾಗದ ಹಲವು ವರ್ಷಗಳ ಬೇಡಿಕೆಯಾಗಿದ್ದ ಕರ್ನಾಟಕ ಮಾಹಿತಿ ಆಯೋಗದ ಪೀಠ ನಗರದಲ್ಲಿ ಸೋಮವಾರ ಆರಂಭಗೊಂಡಿದೆ. </p>.<p>ಇಲ್ಲಿನ ರೈಲು ನಿಲ್ದಾಣದ ಬಳಿ ಇರುವ ಮಹಲ್–ಇ–ಶಾಹಿ ಅತಿಥಿಗೃಹದ ಆವರಣದಲ್ಲಿ ಹಳೆಯ ಅತಿಥಿಗೃಹವನ್ನು ಆಯೋಗಕ್ಕೆ ನೀಡಲಾಗಿದ್ದು, ಅದಕ್ಕೆ ಸುಣ್ಣ ಬಣ್ಣ ಬಳಿದು ನವೀಕರಿಸಲಾಗಿದೆ. ಆಯೋಗದ ಪೀಠ ಕಾರ್ಯಾರಂಭದ ಮೊದಲ ದಿನವಾದ ಸೋಮವಾರ ಆಯೋಗದ ಅಧಿಕಾರಿಗಳು ಭೇಟಿ ನೀಡಿದರು.</p>.<p>ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಠಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪಾರ್ಕಿಂಗ್, ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಇನ್ನಷ್ಟೇ ಕಲ್ಪಿಸಬೇಕಿದೆ. ಪೀಠದ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಸೋಮವಾರವೂ ನಡೆದಿತ್ತು.</p>.<p>ಕಲಬುರಗಿ ಪೀಠದ ಮಾಹಿತಿ ಆಯುಕ್ತರನ್ನಾಗಿ ರವೀಂದ್ರ ಗುರುನಾಥ ಡಾಕಪ್ಪ ಅವರನ್ನು ನೇಮಕ ಮಾಡಲಾಗಿದೆ. ಆಯೋಗದ ಪೀಠವನ್ನು ಪಬ್ಲಿಕ್ ಗಾರ್ಡನ್ ಬಳಿ ಇರುವ ಹಳೆಯ ಲೋಕೋಪಯೋಗಿ ಕಚೇರಿಯ ಕಟ್ಟಡದಲ್ಲಿ ಆರಂಭಿಸುವ ಪ್ರಸ್ತಾವ ಇತ್ತು. ಅಂತಿಮವಾಗಿ ಮಹಲ್ –ಇ –ಶಾಹಿ ಅತಿಥಿಗೃಹದ ಆವರಣದಲ್ಲಿ ಆರಂಭಿಸಲಾಗಿದೆ. </p>.<p>‘ಮಹಲ್ –ಇ– ಶಾಹಿಯಲ್ಲಿ ಆಯೋಗದ ಪೀಠವನ್ನು ಆರಂಭಿಸಿರುವುದರಿಂದ ಪ್ರಕರಣಗಳ ವಿಚಾರಣೆಗಾಗಿ ಬರುವ ದೂರುದಾರರಿಗೆ ತೊಂದರೆಯಾಗಲಿದೆ. ಜನರಿಗೆ ತಕ್ಷಣ ಬರಲು ಸಾಧ್ಯವಾಗುವ ಸ್ಥಳದಲ್ಲಿ ಪೀಠದ ಕಚೇರಿ ಆರಂಭಿಸಬೇಕಿತ್ತು‘ ಎಂದು ಹೈಕೋರ್ಟ್ ವಕೀಲ <br>ಪಿ. ವಿಲಾಸಕುಮಾರ್ ಒತ್ತಾಯಿಸಿದ್ದಾರೆ.</p>.<p> <strong>3 ದಿನ ವಿಚಾರಣೆ ರದ್ದು:</strong></p><p>ಜನವರಿ 2ರಿಂದ 4ರವರೆಗೆ ಮಾಹಿತಿ ಆಯೋಗದ ಮುಂದೆ ನಿಗದಿಪಡಿಸಿದ್ದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ ಎಂದು ಆಯೋಗದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>