<p><strong>ಆಳಂದ: ತಾ</strong>ಲ್ಲೂಕಿನ ಸರಸಂಬಾ ಗ್ರಾಮದಲ್ಲಿ ದಯಾಲಿಂಗೇಶ್ವರರ 20ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.</p>.<p>ನಿರಗುಡಿ ಮಲ್ಲಯ್ಯ ಮುತ್ತ್ಯಾ ಅವರ ನೇತೃತ್ವದಲ್ಲಿ ನಡೆದ ಜಾತ್ರೆಯಲ್ಲಿ ಗಡಿಭಾಗದ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗಿಯಾಗಿದ್ದರು.</p>.<p>ಗ್ರಾಮದ ಹೊರವಲಯದಿಂದ ಮಲ್ಲಯ್ಯ ಮುತ್ತ್ಯಾ ನಿರಗುಡಿ ಅವರನ್ನು ತೆರೆದ ಜೀಪ್ನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಲಂಬಾಣಿ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಲೇಜಿಮ್, ತಮಟೆ ಮತ್ತಿತರ ವಾದ್ಯಗಳ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.</p>.<p>ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ವಕ್ತಾರ ವೈಜುನಾಥ ಝಳಕಿ, ರೈತ ಮುಖಂಡ ದಯಾನಂದ ಪಾಟೀಲ ಮಾತನಾಡಿದರು.</p>.<p>ಪ್ರಮುಖರಾದ ಪ್ರಕಾಶ ಮುತ್ತ್ಯಾ, ಅಕ್ಕಲಕೋಟ ಜಿ.ಪಂ ಸದಸ್ಯ ಆನಂದ ತೋಂಡೆ, ಶ್ರೀಶೈಲ ತೋಮರೆ, ವಿಜಯಕುಮಾರ, ಶ್ರೀಶೈಲ ಪಾಟೀಲ, ಸಂತೋಷ ಬೋನೆ, ಸಂದೇಶ ಪವಾರ, ಸಿದ್ದಣ್ಣಾ ಹೂಗಾರ ಇದ್ದರು.</p>.<p>ರಾತ್ರಿ ಕುಸ್ತಿ ಸ್ಪರ್ಧೆಗಳು ನಡೆದವು. ಕಲಬುರಗಿ, ಬೀದರ್ ಜಿಲ್ಲೆ ಸೇರಿದಂತೆ ನೆರೆಯ ಸೋಲ್ಲಾಪುರ, ಉಮರ್ಗಾದಿಂದಲೂ ಕುಸ್ತಿ ಪೈಲ್ವಾನರು ಸ್ಪರ್ಧೆಗೆ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ: ತಾ</strong>ಲ್ಲೂಕಿನ ಸರಸಂಬಾ ಗ್ರಾಮದಲ್ಲಿ ದಯಾಲಿಂಗೇಶ್ವರರ 20ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.</p>.<p>ನಿರಗುಡಿ ಮಲ್ಲಯ್ಯ ಮುತ್ತ್ಯಾ ಅವರ ನೇತೃತ್ವದಲ್ಲಿ ನಡೆದ ಜಾತ್ರೆಯಲ್ಲಿ ಗಡಿಭಾಗದ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗಿಯಾಗಿದ್ದರು.</p>.<p>ಗ್ರಾಮದ ಹೊರವಲಯದಿಂದ ಮಲ್ಲಯ್ಯ ಮುತ್ತ್ಯಾ ನಿರಗುಡಿ ಅವರನ್ನು ತೆರೆದ ಜೀಪ್ನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಲಂಬಾಣಿ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಲೇಜಿಮ್, ತಮಟೆ ಮತ್ತಿತರ ವಾದ್ಯಗಳ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.</p>.<p>ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ವಕ್ತಾರ ವೈಜುನಾಥ ಝಳಕಿ, ರೈತ ಮುಖಂಡ ದಯಾನಂದ ಪಾಟೀಲ ಮಾತನಾಡಿದರು.</p>.<p>ಪ್ರಮುಖರಾದ ಪ್ರಕಾಶ ಮುತ್ತ್ಯಾ, ಅಕ್ಕಲಕೋಟ ಜಿ.ಪಂ ಸದಸ್ಯ ಆನಂದ ತೋಂಡೆ, ಶ್ರೀಶೈಲ ತೋಮರೆ, ವಿಜಯಕುಮಾರ, ಶ್ರೀಶೈಲ ಪಾಟೀಲ, ಸಂತೋಷ ಬೋನೆ, ಸಂದೇಶ ಪವಾರ, ಸಿದ್ದಣ್ಣಾ ಹೂಗಾರ ಇದ್ದರು.</p>.<p>ರಾತ್ರಿ ಕುಸ್ತಿ ಸ್ಪರ್ಧೆಗಳು ನಡೆದವು. ಕಲಬುರಗಿ, ಬೀದರ್ ಜಿಲ್ಲೆ ಸೇರಿದಂತೆ ನೆರೆಯ ಸೋಲ್ಲಾಪುರ, ಉಮರ್ಗಾದಿಂದಲೂ ಕುಸ್ತಿ ಪೈಲ್ವಾನರು ಸ್ಪರ್ಧೆಗೆ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>