<p><strong>ಸೇಡಂ:</strong> ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭಾರತೀಯ ಸಂಸ್ಕೃತಿಯ ಉತ್ಸವದಲ್ಲಿ ಹಲವು ಘಟಾನುಘಟಿಗಳು ಭಾಗವಹಿಸಿ ಮಾತನಾಡಿದ್ದರು. ಅದಕ್ಕೆ ಕಲಶವಿಟ್ಟಂತೆ ಚಿತ್ರನಟ ರಮೇಶ್ ಅರವಿಂದ್ ಶುಕ್ರವಾರ ನಡೆದ ಯುವ ಸಮಾವೇಶದಲ್ಲಿ ಭಾಗವಹಿಸಿ ಯುವಕರಲ್ಲಿ ಹೊಸ ಸಂಚಲನ ಮೂಡಿಸಿದರು.</p>.<p>ಕಾರ್ಯಕ್ರಮದ ಆರಂಭದಲ್ಲಿ ಜಲಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿ, ಪದ್ಮಶ್ರೀ ಪುರಸ್ಕೃತರಾದ ಉತ್ತರ ಪ್ರದೇಶದ ಉಮಾಶಂಕರ್ ಪಾಂಡೆ ಅವರು ನೀರಿನ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ನೆಚ್ಚಿನ ನಟನ ಮಾತುಗಳನ್ನು ಕೇಳಲು ಬಯಸಿದ್ದ ಯುವಕರು ಅವರ ಭಾಷಣಕ್ಕೆ ಕಾತರಿಸುತ್ತಿದ್ದರು. </p>.<p>ಆಗ ಮಧ್ಯಪ್ರವೇಶಿಸಿದ ಉತ್ಸವದ ಆಯೋಜಕ ಬಸವರಾಜ ಪಾಟೀಲ ಸೇಡಂ ಅವರು, ‘ಯಾರ್ಯಾರು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತಾರೆ. ಅಲ್ಲಿಯತನಕ ಸಮಾಧಾನದಿಂದಿರಿ’ ಎಂದು ಹೇಳಬೇಕಾಯಿತು.</p>.<p>ರಮೇಶ್ ಅರವಿಂದ್ ಅವರ ಸರದಿ ಬರುತ್ತಿದ್ದಂತೆಯೇ ಯುವಕ, ಯುವತಿಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. </p>.<p>ಯುವಕರನ್ನುದ್ದೇಶಿಸಿ ಮಾತನಾಡಿದ ನಟ ರಮೇಶ್ ಅರವಿಂದ್, ‘ಮೊಬೈಲ್ ಎಂಬ ‘ಬುದ್ಧಿ ಬಾವಿ’ಯ ನೀರನ್ನು ಎಲ್ಲರೂ ಕುಡಿಯಬೇಕು. ಅದರಲ್ಲಿರುವ ಜ್ಞಾನವನ್ನು ಸಂಪಾದಿಸಿ, ಸಮಾಜಕ್ಕೆ ಸದ್ಬಳಕೆಯಾಗುವ ನಿಟ್ಟಿನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.</p>.<p>‘ಸಂಸ್ಕೃತಿ ಎನ್ನುವುದು ಭಾರತೀಯತೆಯ ಪ್ರತಿಯೊಬ್ಬನ ಜೀವನದಲ್ಲಿ ಹಾಸು ಹೊಕ್ಕಿದೆ. ಅದನ್ನು ನಾವು ಹೆಕ್ಕಿ ಪರಂಪರೆಯಿಂದ ಪರಂಪರೆಗೆ ಸಾಗಿಸಬೇಕಿದೆ. ಮಾನವನಲ್ಲಿರುವ ವಿಚಾರಶಕ್ತಿ ನಿತ್ಯ ನಿರಂತರವಾಗಿ ಹರಿಯುತ್ತಿದ್ದು, ಸಂಸ್ಕೃತಿ ಎಂದಿಗೂ ನಾಶವಾಗುವುದಿಲ್ಲ. ಅದು ನಮ್ಮ ಉಸಿರು, ನಮ್ಮ ಅಸ್ತಿತ್ವ, ಹೃದಯದ ಆಳಕ್ಕಿದೆ’ ಎಂದರು.</p>.<p>ಮುನಿ ಅಂತರರಾಷ್ಟ್ರೀಯ ಶಾಲೆ ಸಂಸ್ಥಾಪಕ ಅಶೋಕ ಠಾಕೂರ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಚಿಂತಕ ಮಹೇಶ ಮಾಶಾಳ ರಚಿಸಿದ ಗಿಗಾ ಬೈಟ್ ಪುಸ್ತಕವನ್ನು ನಟ ರಮೇಶ್ ಅರವಿಂದ್ ಲೋಕಾರ್ಪಣೆಗೊಳಿಸಿದರು.</p>.<p>ಕಲ್ಯಾಣ ಕರ್ನಾಟಕ ಸ್ವಾಗತ ಸಮಿತಿ ಕಾರ್ಯದರ್ಶಿ ಕೆ.ಎಸ್. ಮಾಲಿಪಾಟೀಲ, ನಿವೃತ್ತ ಪೊಲೀಸ್ ಅಧಿಕ್ಷಕ ಸಿ.ಎನ್ ಭಂಡಾರಿ, ಸೂರಜ ಬಾಬಾ , ಸುಧೀರ ಕುಮಾರ ಬಾಬಾ, ಭಾಗ್ಯಶ್ರೀ ಬಾಬಾ ಸೇರಿದಂತೆ ಇನ್ನಿತರರು ಇದ್ದರು. ಗುಲಬರ್ಗಾ ವಿ.ವಿ. ವಿಶ್ರಾಂತ ಕುಲಪತಿ ದಯಾನಂದ ಅಗಸರ ಸ್ವಾಗತಿಸಿದರು. ಅಮೂಲ್ಯ ನಿರೂಪಿಸಿದರು.</p>.<p>ಇದಕ್ಕೂ ಮುನ್ನ ನಟ ರಮೇಶ್ ಅರವಿಂದ್, ವಿಜಯಪುರದ ಸಿದ್ಧೇಶ್ವರ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಫೋಟೋ ಗ್ಯಾಲರಿಯನ್ನು ರಮೇಶ್ ಅರವಿಂದ ವೀಕ್ಷಿಸಿದರು. ಸ್ವರ್ಣ ಜಯಂತಿ ಪ್ರಮುಖ ವಿಶ್ವನಾಥ ಕೋರಿ ಮಾಹಿತಿ ನೀಡಿದರು. ಚನ್ನಬಸವ ಬಳತೆ ಇದ್ದರು.</p>.<p>Quote - ಸಮಾಜಕ್ಕೆ ನೀರು ಮುಖ್ಯವಾಗಿದ್ದು ಅದರ ಮೌಲ್ಯ ಅರಿತು ಯುವಜನ ತಮ್ಮ ಮೌಲ್ಯಯುತ ಸಮಯವನ್ನು ವ್ಯರ್ಥಮಾಡದೇ ನೀರಿನ ಸಂರಕ್ಷಣೆಯತ್ತ ಗಮನ ಹರಿಸಬೇಕು ಉಮಾಶಂಕರ ಪಾಂಡೆ ಅಂತರ್ಜಲ ಸಂರಕ್ಷಣಾ ಸಮಿತಿ ಸದಸ್ಯ</p>.<p>Quote - ಬಸವರಾಜ ಪಾಟೀಲ ಸೇಡಂ ಅವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಯಾರ ಬರುವಿಕೆಗೂ ಕಾಯುವುದಿಲ್ಲ. ಸರ್ಕಾರ ಬರಲಿ ಬರದೇ ಇರಲಿ ಅದು ನಿರಂತರ ಸಾಗುತ್ತಲೇ ಇರುತ್ತದೆ ಶರಣಗೌಡ ಕಂದಕೂರ ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ:</strong> ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭಾರತೀಯ ಸಂಸ್ಕೃತಿಯ ಉತ್ಸವದಲ್ಲಿ ಹಲವು ಘಟಾನುಘಟಿಗಳು ಭಾಗವಹಿಸಿ ಮಾತನಾಡಿದ್ದರು. ಅದಕ್ಕೆ ಕಲಶವಿಟ್ಟಂತೆ ಚಿತ್ರನಟ ರಮೇಶ್ ಅರವಿಂದ್ ಶುಕ್ರವಾರ ನಡೆದ ಯುವ ಸಮಾವೇಶದಲ್ಲಿ ಭಾಗವಹಿಸಿ ಯುವಕರಲ್ಲಿ ಹೊಸ ಸಂಚಲನ ಮೂಡಿಸಿದರು.</p>.<p>ಕಾರ್ಯಕ್ರಮದ ಆರಂಭದಲ್ಲಿ ಜಲಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿ, ಪದ್ಮಶ್ರೀ ಪುರಸ್ಕೃತರಾದ ಉತ್ತರ ಪ್ರದೇಶದ ಉಮಾಶಂಕರ್ ಪಾಂಡೆ ಅವರು ನೀರಿನ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ನೆಚ್ಚಿನ ನಟನ ಮಾತುಗಳನ್ನು ಕೇಳಲು ಬಯಸಿದ್ದ ಯುವಕರು ಅವರ ಭಾಷಣಕ್ಕೆ ಕಾತರಿಸುತ್ತಿದ್ದರು. </p>.<p>ಆಗ ಮಧ್ಯಪ್ರವೇಶಿಸಿದ ಉತ್ಸವದ ಆಯೋಜಕ ಬಸವರಾಜ ಪಾಟೀಲ ಸೇಡಂ ಅವರು, ‘ಯಾರ್ಯಾರು ಯಾವಾಗ ಮಾತನಾಡಬೇಕೋ ಆಗ ಮಾತನಾಡುತ್ತಾರೆ. ಅಲ್ಲಿಯತನಕ ಸಮಾಧಾನದಿಂದಿರಿ’ ಎಂದು ಹೇಳಬೇಕಾಯಿತು.</p>.<p>ರಮೇಶ್ ಅರವಿಂದ್ ಅವರ ಸರದಿ ಬರುತ್ತಿದ್ದಂತೆಯೇ ಯುವಕ, ಯುವತಿಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. </p>.<p>ಯುವಕರನ್ನುದ್ದೇಶಿಸಿ ಮಾತನಾಡಿದ ನಟ ರಮೇಶ್ ಅರವಿಂದ್, ‘ಮೊಬೈಲ್ ಎಂಬ ‘ಬುದ್ಧಿ ಬಾವಿ’ಯ ನೀರನ್ನು ಎಲ್ಲರೂ ಕುಡಿಯಬೇಕು. ಅದರಲ್ಲಿರುವ ಜ್ಞಾನವನ್ನು ಸಂಪಾದಿಸಿ, ಸಮಾಜಕ್ಕೆ ಸದ್ಬಳಕೆಯಾಗುವ ನಿಟ್ಟಿನಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.</p>.<p>‘ಸಂಸ್ಕೃತಿ ಎನ್ನುವುದು ಭಾರತೀಯತೆಯ ಪ್ರತಿಯೊಬ್ಬನ ಜೀವನದಲ್ಲಿ ಹಾಸು ಹೊಕ್ಕಿದೆ. ಅದನ್ನು ನಾವು ಹೆಕ್ಕಿ ಪರಂಪರೆಯಿಂದ ಪರಂಪರೆಗೆ ಸಾಗಿಸಬೇಕಿದೆ. ಮಾನವನಲ್ಲಿರುವ ವಿಚಾರಶಕ್ತಿ ನಿತ್ಯ ನಿರಂತರವಾಗಿ ಹರಿಯುತ್ತಿದ್ದು, ಸಂಸ್ಕೃತಿ ಎಂದಿಗೂ ನಾಶವಾಗುವುದಿಲ್ಲ. ಅದು ನಮ್ಮ ಉಸಿರು, ನಮ್ಮ ಅಸ್ತಿತ್ವ, ಹೃದಯದ ಆಳಕ್ಕಿದೆ’ ಎಂದರು.</p>.<p>ಮುನಿ ಅಂತರರಾಷ್ಟ್ರೀಯ ಶಾಲೆ ಸಂಸ್ಥಾಪಕ ಅಶೋಕ ಠಾಕೂರ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಚಿಂತಕ ಮಹೇಶ ಮಾಶಾಳ ರಚಿಸಿದ ಗಿಗಾ ಬೈಟ್ ಪುಸ್ತಕವನ್ನು ನಟ ರಮೇಶ್ ಅರವಿಂದ್ ಲೋಕಾರ್ಪಣೆಗೊಳಿಸಿದರು.</p>.<p>ಕಲ್ಯಾಣ ಕರ್ನಾಟಕ ಸ್ವಾಗತ ಸಮಿತಿ ಕಾರ್ಯದರ್ಶಿ ಕೆ.ಎಸ್. ಮಾಲಿಪಾಟೀಲ, ನಿವೃತ್ತ ಪೊಲೀಸ್ ಅಧಿಕ್ಷಕ ಸಿ.ಎನ್ ಭಂಡಾರಿ, ಸೂರಜ ಬಾಬಾ , ಸುಧೀರ ಕುಮಾರ ಬಾಬಾ, ಭಾಗ್ಯಶ್ರೀ ಬಾಬಾ ಸೇರಿದಂತೆ ಇನ್ನಿತರರು ಇದ್ದರು. ಗುಲಬರ್ಗಾ ವಿ.ವಿ. ವಿಶ್ರಾಂತ ಕುಲಪತಿ ದಯಾನಂದ ಅಗಸರ ಸ್ವಾಗತಿಸಿದರು. ಅಮೂಲ್ಯ ನಿರೂಪಿಸಿದರು.</p>.<p>ಇದಕ್ಕೂ ಮುನ್ನ ನಟ ರಮೇಶ್ ಅರವಿಂದ್, ವಿಜಯಪುರದ ಸಿದ್ಧೇಶ್ವರ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಫೋಟೋ ಗ್ಯಾಲರಿಯನ್ನು ರಮೇಶ್ ಅರವಿಂದ ವೀಕ್ಷಿಸಿದರು. ಸ್ವರ್ಣ ಜಯಂತಿ ಪ್ರಮುಖ ವಿಶ್ವನಾಥ ಕೋರಿ ಮಾಹಿತಿ ನೀಡಿದರು. ಚನ್ನಬಸವ ಬಳತೆ ಇದ್ದರು.</p>.<p>Quote - ಸಮಾಜಕ್ಕೆ ನೀರು ಮುಖ್ಯವಾಗಿದ್ದು ಅದರ ಮೌಲ್ಯ ಅರಿತು ಯುವಜನ ತಮ್ಮ ಮೌಲ್ಯಯುತ ಸಮಯವನ್ನು ವ್ಯರ್ಥಮಾಡದೇ ನೀರಿನ ಸಂರಕ್ಷಣೆಯತ್ತ ಗಮನ ಹರಿಸಬೇಕು ಉಮಾಶಂಕರ ಪಾಂಡೆ ಅಂತರ್ಜಲ ಸಂರಕ್ಷಣಾ ಸಮಿತಿ ಸದಸ್ಯ</p>.<p>Quote - ಬಸವರಾಜ ಪಾಟೀಲ ಸೇಡಂ ಅವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಯಾರ ಬರುವಿಕೆಗೂ ಕಾಯುವುದಿಲ್ಲ. ಸರ್ಕಾರ ಬರಲಿ ಬರದೇ ಇರಲಿ ಅದು ನಿರಂತರ ಸಾಗುತ್ತಲೇ ಇರುತ್ತದೆ ಶರಣಗೌಡ ಕಂದಕೂರ ಶಾಸಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>