ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಕಲಬುರಗಿ | ಅ‍ಪ್ಪ ಕೆರೆ ಅಂದ ಕಸಿದ ‘ಅಂತರಗಂಗೆ’: ಪ್ರವಾಸಿಗರ ಬೋಟಿಂಗ್‌ಗೆ ತೊಡಕು

Published : 29 ಅಕ್ಟೋಬರ್ 2025, 6:36 IST
Last Updated : 29 ಅಕ್ಟೋಬರ್ 2025, 6:36 IST
ಫಾಲೋ ಮಾಡಿ
Comments
ಕಲಬುರಗಿ ನಗರದ ಶರಣಬಸವೇಶ್ವರ ಕೆರೆಯನ್ನು ಜಲಕಳೆ (ಅಂತರಗಂಗೆ) ಆವರಿಸಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿ ನಗರದ ಶರಣಬಸವೇಶ್ವರ ಕೆರೆಯನ್ನು ಜಲಕಳೆ (ಅಂತರಗಂಗೆ) ಆವರಿಸಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಅಪ್ಪ ಕೆರೆಯಲ್ಲಿನ ‘ಜಲಕಳೆ’ ಸಸ್ಯದ ಸಮಸ್ಯೆ ಗಮನಕ್ಕಿದೆ. ಈ ಕುರಿತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕಲಬುರಗಿ ಪ್ರಾದೇಶಿಕ ಆಯುಕ್ತರ ಗಮನ ಸೆಳೆಯಲಾಗಿದೆ
ಅವಿನಾಶ ಶಿಂದೆ ಪಾಲಿಕೆ ಆಯುಕ್ತ
ದೋಣಿ ವಿಹಾರ ನಡೆಸಲು ಕೆರೆಗೆ ಬಂದಿದ್ದೆ. ಇಲ್ಲಿನ ಕಸ ನೋಡಿ ಬೇಸರವಾಯಿತು. ನೀರೂ ವಾಸನೆ ಹೊಡೆಯುತ್ತಿದೆ. ಸಂಬಂಧಿಸಿದವರು ಶುಚಿತ್ವಕ್ಕೆ ಆದ್ಯತೆ ನೀಡಬೇಕು
ಬಸವರಾಜ ಕಲಬುರಗಿ ನಿವಾಸಿ
ಜನರಿಂದಲೂ ನಿರ್ಲಕ್ಷ್ಯ
ಕೆರೆ ಆವರಣದಲ್ಲಿ ಕಲ್ಯಾಣಿ ನಿರ್ಮಿಸಿದ್ದರೂ ಕಲಬುರಗಿಯ ‘ಭಕ್ತರು’ ಈಗಲೂ ದೇವರ ಪೂಜಾ ತ್ಯಾಜ್ಯವನ್ನು ತಂದು ಕೆರೆಗೆ ಎಸೆಯುವುದನ್ನು ಬಿಟ್ಟಿಲ್ಲ! ದೇವರಿಗೆ ಅಲಂಕಾರಕ್ಕೆ ಬಳಸಿದ ಹೂವುಗಳು ಬಾಳೆಕಂದು ಕಬ್ಬು ಸೇರಿದಂತೆ ಹಲವು ತ್ಯಾಜ್ಯಗಳನ್ನು ಪ್ಲಾಸ್ಟಿಕ್‌ಗಳಲ್ಲಿ ತಂದು ಸುರಿಯುವ ಪ್ರವೃತ್ತಿ ಮುಂದುವರಿದಿದೆ. ಕಸದೊಂದಿಗೆ ಅಲ್ಲಲ್ಲಿ ಗಿಡ–ಗಂಟಿಗಳು ಬೆಳೆದು ಕೆರೆಯ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ.
ಏನಿದು ‘ಅಂತರಗಂಗೆ’?
‘ಅಂತರಗಂಗೆ’ಯು ಪೊಂಟೆಡೆರಿಯಾಸಿಯೆ (Pontederiaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು ಹೂವು ಬಿಡುವ ಜಲಸಸ್ಯ. ನೀರಿನ ಮೇಲೆ ತೇಲುತ್ತಲೆ ಬೆಳೆಯುತ್ತದೆ. ಬೇಸಿಗೆ ಸಮಯದಲ್ಲಿ ಅತ್ಯಂತ ಆಕ್ರಮಣಶಾಲಿಯಾಗಿ ಬೆಳೆಯುತ್ತದೆ. ಈ ಕಳೆಯನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸಬೇಕು. ಇಲ್ಲದಿದ್ದರೆ ಇಡೀ ಜಲಮೂಲವನ್ನೇ ಆಕ್ರಮಿಸಿಕೊಳ್ಳುತ್ತದೆ. ಸೂರ್ಯನ ಕಿರಣಗಳು ಜಲತಳವನ್ನು ತಲುಪಲು ಕೂಡ ಅಡ್ಡಿಯಾಗುತ್ತದೆ. ನೀರಿನಲ್ಲಿನ ಆಮ್ಲಜನಕದ ಪ್ರಮಾಣ ಕ್ಷೀಣಿಸುವಂತೆ ಮಾಡಿ ಜಲಚರಗಳ ಸಂತತಿ ಮೇಲೂ ಪರಿಣಾಮ ಬೀರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT