ಸಿದ್ಧಸಿರಿ ಸೌಹಾರ್ದ ಸಹಕಾರಿಯ ಸಿದ್ಧಸಿರಿ ಎಥೆನಾಲ್ ಮತ್ತು ವಿದ್ಯುತ್ ಘಟಕದಲ್ಲಿ ಕಬ್ಬು ನುರಿಸಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ. ಅನುಮತಿ ಕೋರಿ ಸಲ್ಲಿಸಿದ ಅರ್ಜಿಗೆ ಅಗತ್ಯ ದಾಖಲಾತಿ ಸಲ್ಲಿಸದೇ ಅಪೂರ್ಣವಾಗಿರುವ ಕುರಿತು ತಮಗೆ ಲಿಖಿತ ಮಾಹಿತಿ ನೀಡಿ, ಸೂಕ್ತ ದಾಖಲೆ ಒದಗಿಸಿ ಕಬ್ಬು ಅರೆಯುವ ಅನುಮತಿ ಪಡೆಯುವಂತೆ ನಿಮಗೆ ಸೂಚಿಸಲಾಗಿತ್ತು. ಆದರೂ ನೀವು ಅನುಮತಿ ಪಡೆಯದೇ ಕಬ್ಬು ನುರಿಸಲು ಪ್ರಾರಂಭಿಸಿದ್ದು ಕಬ್ಬು (ನಿಯಂತ್ರಣ) ಆದೇಶ 1966ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ಕಬ್ಬು ಅರಿಯುವ ಪರವಾನಗಿ ನವೀಕರಿಸಿಕೊಳ್ಳದೇ, ಕಬ್ಬು ರಸ ಮತ್ತು ಸಕ್ಕರೆ ರಸದಿಂದ ಎಥೆನಾಲ್ ಉತ್ಪಾದಿಸಿದ ನಿಮ್ಮ ವಿರುದ್ದ ಏಕೆ ಮೊಕದ್ದಮೆ ದಾಖಲಿಸಬಾರದು ಎಂಬುದಕ್ಕೆ ಸಮಜಾಯಿಷಿ ಅಥವಾ ಉತ್ತರ ನೀಡುವಂತೆ ಜನವರಿ 24ರಂದು ಪತ್ರ ಬರೆಯಲಾಗಿತ್ತು.
ಆದರೂ ಈವರೆಗೂ ಉತ್ತರ ಅಥವಾ ಸಮಜಾಯಿಷಿ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 24 ಗಂಟೆಯೊಳಗಾಗಿ ಪ್ರತಿಕ್ರಿಯೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಫೆ. 16ರಂದು ನೀಡಿದ ಕಾರಣ ಕೇಳಿ ನೋಟಿಸ್ನಲ್ಲಿ ತಿಳಿಸಿದ್ದಾರೆ.