ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್ಆರ್ಸಿ, ಎನ್ಪಿಆರ್ಗೆ ಯಾವುದೇ ದಾಖಲೆಗಳನ್ನು ನೀಡದಿರುವ ಮೂಲಕ ಅಸಹ ಕಾರ ಚಳವಳಿ ನಡೆಸಲು ನಿರ್ಧರಿ ಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪಕ್ಷದಿಂದ ಮನೆ ಮನೆಗೆ ತೆರಳುವ ಅಭಿಯಾನ ನಡೆಸಲಿದ್ದೇವೆ. ನಮ್ಮ ವಿರೋಧ ಇರುವುದು ಎನ್ಆರ್ಸಿ, ಎನ್ಪಿಆರ್ಗೆ ಹೊರತು ಜನಗಣತಿಗಲ್ಲ’ ಎಂದು ಸ್ಪಷ್ಟಪಡಿಸಿದರು.