ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಛೆ ದಿನ್ ತರುವುದಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಜನರ ಮೇಲೆ ಅನಗತ್ಯ ಬೆಲೆ ಏರಿಕೆ ಹೊರೆಯನ್ನು ಹೊರಿಸಿದೆ. ನಿರಂತರವಾಗಿ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದ್ದರಿಂದ ಮಧ್ಯಮ ವರ್ಗದವರು, ಬಡವರು ದಿನ ದೂಡುವುದೇ ಕಷ್ಟವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡುತ್ತಿದೆ. ನೋಟ್ ಬ್ಯಾನ್, ಲಾಕ್ ಡೌನ್ ನಿಂದಾಗಿ ಜನರು ತತ್ತರಿಸಿದ ಸಂದರ್ಭದಲ್ಲಿಯೂ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ ಅದಾನಿ ಅವರ ಆಸ್ತಿ ಸಾಕಷ್ಟು ಹೆಚ್ಚಾಗಿದೆ. ಅದಾನಿ ನಿತ್ಯ ₹ 12 ಕೋಟಿ ಗಳಿಸುತ್ತಿದ್ದಾರೆ ಎಂದು ಟೀಕಿಸಿದರು.