ಹೌದು. ಅಹಿಂಸೆಯೇ ಜೈನ ಧರ್ಮದ ಮೂಲ ಆಶಯ. ಪ್ರಪಂಚದ ಜೀವರಾಶಿಗಳಲ್ಲಿ ಸಣ್ಣಸಣ್ಣ ಕ್ರಿಮಿ– ಕೀಟಗಳಿಗೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಿಂಸೆ ಮಾಡಬಾರದು ಎನ್ನುವುದು ಸಿದ್ಧಾಂತ. ದೀಪಾವಳಿಯಲ್ಲಿ ಮನೆತುಂಬ ದೀಪಗಳನ್ನು ಹಚ್ಚಿದರೆ ಅದರ ಆಕರ್ಷಣೆಗೆ ಬರುವ ದೀಪದಹುಳಗಳು ಸುಟ್ಟು ಸಾಯುತ್ತವೆ. ಇದರಿಂದ ಹುಳಗಳಿಗೆ ಹಿಂಸೆ ಮಾಡಿದಂತಾಗುತ್ತದೆ. ಹಾಗಾಗಿ, ಬೆಳಕಿನ ಹಬ್ಬದಲ್ಲಿ ಸಾಲು ದೀಪ ಅಥವಾ ವಿದ್ಯುದ್ದೀಪಾಲಂಕಾರ ಮಾಡುವುದು ಕೂಡ ಜೈನರಲ್ಲಿ ನಿಷಿದ್ಧ.