ಬುಧವಾರ ಬೆಳಿಗ್ಗೆ ಜೆಸಿಬಿ ಮತ್ತು ಪೊಲೀಸ್ ಬಂದೋಬಸ್ತ್ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.ಅಂಗಡಿಗಳು ಇರುವ ಸ್ಥಳದಲ್ಲಿ ಪುರಸಭೆ ವತಿಯಿಂದ ವ್ಯಾಪಾರ ಮಳಿಗೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಸುಮಾರು 31ಕ್ಕೂ ಅಧಿಕ ಮಳಿಗೆಗಳು ನಿರ್ಮಾಣವಾಗಲಿವೆ. ಆದ್ದರಿಂದ ಸ್ಥಳ ತೆರುವುಗೊಳಿಸುವುದು ಅನಿವಾರ್ಯವಾಗಿತ್ತು. ಆದ್ದರಿಂದ ತೆರುವುಗೊಳಿಸಲಾಗಿದೆ’ ಎನ್ನುವುದು ಪುರಸಭೆ ಅಧಿಕಾರಿಗಳ ಮಾತು. ಗೂಡಂಗಡಿ ಇರುವ ಸ್ಥಳದಲ್ಲಿ ಒಂದು ಕುಟುಂಬ ಬುಟ್ಟಿ ನೇಯ್ಗೆ ಕಾಯಕ ಮಾಡುತ್ತಲೇ ಜೀವನ ಸಾಗಿಸುತ್ತಿತ್ತು. ಈ ಕುಟುಂಬಕ್ಕೆ ಅಧಿಕಾರಿಗಳು ಬೇರೆ ಕಡೆ ಆಶ್ರಯ ನೀಡುವುದಾಗಿ ಭರವಸೆ ನೀಡಿ ಪುರಸಭೆ ವಾಹನದಲ್ಲಿಯೇ ಮನೆಯ ಸಾಮಗ್ರಿಗಳನ್ನು ಸಾಗಿಸಿ ಮಾನವೀಯತೆ ಮೆರೆದರು.