<p><strong>ಗಂಗಾವತಿ:</strong> ಇತಿಹಾಸಪ್ರಸಿದ್ಧಿಯನ್ನು ಪಡೆದಿರುವ ಅಂಜನಾದ್ರಿಯ ಬೆಟ್ಟದಆಂಜನೇಯ ಸ್ವಾಮಿಯ ಆದಾಯ ಒಂದು ವರ್ಷದಲ್ಲೇ ಒಂದು ಕೋಟಿ ದಾಟುವ ಮೂಲಕ ಮತ್ತೊಂದು ದಾಖಲೆ ಮಾಡಿದೆ.</p>.<p>ಇದು ರಾಮಾಯಣ ಕಾಲದ ಚರಿತ್ರೆಯೊಂದಿಗೆ ಥಳುಕು ಹಾಕಿಕೊಂಡಿರುವ ಹಾಗೂ ಪವನಸುತ ಆಂಜನೇಯನ ಜನ್ಮಸ್ಥಳ ಎಂಬ ಪ್ರತೀತಿ ಹಿನ್ನೆಲೆ ಸಾಕಷ್ಟು ಭಕ್ತರ ದಂಡೇ ಅಂಜನಾದ್ರಿಯಲ್ಲಿ ಪ್ರತಿ ಶನಿವಾರ ನೆರೆದಿರುತ್ತದೆ.</p>.<p>ಕೇವಲ ರಾಜ್ಯದ ಭಕ್ತರಷ್ಟೇ ಅಲ್ಲದೆ, ಹೊರರಾಜ್ಯದ ಹಾಗೂ ವಿದೇಶಿ ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.</p>.<p>ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್, ನಿತಿನ್ ಗಡ್ಕರಿ, ಪಿಯೂಸ್ ಗೋಯಲ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.</p>.<p>ಇಷ್ಟು ದಿನ ದೇವಸ್ಥಾನದ ಪ್ರಧಾನ ಆರ್ಚಕ ವಿದ್ಯಾದಾಸ ಬಾಬಾ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೆ ಪೂಜೆ ವಿಷಯಕ್ಕೆ ದೇವಸ್ಥಾನದ ಟ್ರಸ್ಟಿನ ಸದಸ್ಯರ ಹಾಗೂ ಬಾಬಾ ನಡುವೆ ಗಲಾಟೆಗಳು ನಡೆದು ಉಲ್ಬಣಗೊಳ್ಳುತ್ತಿದ್ದಂತೆ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಸುಪರ್ದಿಗೆ ಪಡೆದುಕೊಂಡಿತ್ತು.</p>.<p>ಕಂದಾಯ ಹಾಗೂ ಮುಜರಾಯಿ ಇಲಾಖೆ ದೇವಸ್ಥಾನದ ನಿರ್ವಹಣೆಯನ್ನು ವಹಿಸಿಕೊಂಡ ಮೇಲೆ ಅಂಜನಾದ್ರಿಯ ಆದಾಯ ಪ್ರತಿ ತಿಂಗಳು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಜುಲೈ ತಿಂಗಳಿಂದ ಹಿಡಿದು ಈ ವರ್ಷದ ಜುಲೈ ತಿಂಗಳವರೆಗೆ, ಬರೋಬ್ಬರಿ ದೇವಸ್ಥಾನದ ಆದಾಯ ಸುಮಾರು ₹1. 3 ಕೋಟಿ ಸಂಗ್ರಹವಾಗುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.</p>.<p>ಒಂದು ಕೋಟಿ ಆದಾಯದಲ್ಲಿ ಸಿಬ್ಬಂದಿ ವೇತನ, ದಾಸೋಹ ಹಾಗೂ ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ₹ 47 ಲಕ್ಷ ಖರ್ಚು ಮಾಡಲಾಗಿದೆ. ಸದ್ಯ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ₹ 56 ಲಕ್ಷ ಜಮಾ ಆಗಿದೆ ಎಂದು ತಹಶೀಲ್ದಾರ್ ವಿರೇಶ್ ಬಿರಾದಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಇತಿಹಾಸಪ್ರಸಿದ್ಧಿಯನ್ನು ಪಡೆದಿರುವ ಅಂಜನಾದ್ರಿಯ ಬೆಟ್ಟದಆಂಜನೇಯ ಸ್ವಾಮಿಯ ಆದಾಯ ಒಂದು ವರ್ಷದಲ್ಲೇ ಒಂದು ಕೋಟಿ ದಾಟುವ ಮೂಲಕ ಮತ್ತೊಂದು ದಾಖಲೆ ಮಾಡಿದೆ.</p>.<p>ಇದು ರಾಮಾಯಣ ಕಾಲದ ಚರಿತ್ರೆಯೊಂದಿಗೆ ಥಳುಕು ಹಾಕಿಕೊಂಡಿರುವ ಹಾಗೂ ಪವನಸುತ ಆಂಜನೇಯನ ಜನ್ಮಸ್ಥಳ ಎಂಬ ಪ್ರತೀತಿ ಹಿನ್ನೆಲೆ ಸಾಕಷ್ಟು ಭಕ್ತರ ದಂಡೇ ಅಂಜನಾದ್ರಿಯಲ್ಲಿ ಪ್ರತಿ ಶನಿವಾರ ನೆರೆದಿರುತ್ತದೆ.</p>.<p>ಕೇವಲ ರಾಜ್ಯದ ಭಕ್ತರಷ್ಟೇ ಅಲ್ಲದೆ, ಹೊರರಾಜ್ಯದ ಹಾಗೂ ವಿದೇಶಿ ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.</p>.<p>ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್, ನಿತಿನ್ ಗಡ್ಕರಿ, ಪಿಯೂಸ್ ಗೋಯಲ್ ಸೇರಿದಂತೆ ಹಲವಾರು ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು ಅಂಜನಾದ್ರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.</p>.<p>ಇಷ್ಟು ದಿನ ದೇವಸ್ಥಾನದ ಪ್ರಧಾನ ಆರ್ಚಕ ವಿದ್ಯಾದಾಸ ಬಾಬಾ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೆ ಪೂಜೆ ವಿಷಯಕ್ಕೆ ದೇವಸ್ಥಾನದ ಟ್ರಸ್ಟಿನ ಸದಸ್ಯರ ಹಾಗೂ ಬಾಬಾ ನಡುವೆ ಗಲಾಟೆಗಳು ನಡೆದು ಉಲ್ಬಣಗೊಳ್ಳುತ್ತಿದ್ದಂತೆ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಸುಪರ್ದಿಗೆ ಪಡೆದುಕೊಂಡಿತ್ತು.</p>.<p>ಕಂದಾಯ ಹಾಗೂ ಮುಜರಾಯಿ ಇಲಾಖೆ ದೇವಸ್ಥಾನದ ನಿರ್ವಹಣೆಯನ್ನು ವಹಿಸಿಕೊಂಡ ಮೇಲೆ ಅಂಜನಾದ್ರಿಯ ಆದಾಯ ಪ್ರತಿ ತಿಂಗಳು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಜುಲೈ ತಿಂಗಳಿಂದ ಹಿಡಿದು ಈ ವರ್ಷದ ಜುಲೈ ತಿಂಗಳವರೆಗೆ, ಬರೋಬ್ಬರಿ ದೇವಸ್ಥಾನದ ಆದಾಯ ಸುಮಾರು ₹1. 3 ಕೋಟಿ ಸಂಗ್ರಹವಾಗುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.</p>.<p>ಒಂದು ಕೋಟಿ ಆದಾಯದಲ್ಲಿ ಸಿಬ್ಬಂದಿ ವೇತನ, ದಾಸೋಹ ಹಾಗೂ ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ₹ 47 ಲಕ್ಷ ಖರ್ಚು ಮಾಡಲಾಗಿದೆ. ಸದ್ಯ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ₹ 56 ಲಕ್ಷ ಜಮಾ ಆಗಿದೆ ಎಂದು ತಹಶೀಲ್ದಾರ್ ವಿರೇಶ್ ಬಿರಾದಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>