ಪೊಲೀಸರ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮಸ್ಥ ಸಂಗಮಿತ್ರಾ ಡಿಗ್ಗಿ, ಗಡಿ ಬಂದ್ ಮಾಡುವುದೇ ಆದರೆ ಬ್ಯಾರಿಕೇಡ್ ಹಾಕಬಹುದಿತ್ತು. ಕಟ್ಟಿಗೆ ತುಂಡು ಇಡಬಹುದಿತ್ತು. ಇದನ್ನು ಬಿಟ್ಟು ರಸ್ತೆಯನ್ನು ಅಗೆದರೆ ಹೇಗೆ? ನಮ್ಮ ಗ್ರಾಮಗಳಿಗೆ ಉತ್ತಮ ರಸ್ತೆಗಳೇ ಇರುವುದಿಲ್ಲ. ಅಂಥದರಲ್ಲಿ ಡಾಂಬರ್ ರಸ್ತೆಯನ್ನು ಅಗೆಸಿ ಹಾಕಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.