<p><strong>ವಾಡಿ (ಕಲಬುರಗಿ ಜಿಲ್ಲೆ):</strong> ನಿಂದನೆ, ಅಪಹಾಸ್ಯದ ನಡುವೆ ಜೀವನ ಪ್ರೀತಿಯನ್ನು ಉಳಿಸಿಕೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ₹65 ಲಕ್ಷ ವೆಚ್ಚದಲ್ಲಿ ದರ್ಗಾ ಕಟ್ಟಿಸಿದ್ದಾರೆ.</p><p>ಇವರು, ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ಗ್ರಾಮದ ನಿವಾಸಿ ಶಾಂತಿಯಮ್ಮ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಭಿಮಾನಿ ಯೂ ಹೌದು. ಮುಂಬೈನಲ್ಲಿದ್ದ ಸ್ವಂತ ಮನೆಯನ್ನು ಮಾರಿ, ಆ ಹಣದಲ್ಲಿ ಗ್ರಾಮವ್ಯಾಪ್ತಿಯ ಕಡಿದಾದ ಬೆಟ್ಟದ ಮೇಲೆ ಹಜರತ್ ಮೌಲಾಲಿ ದರ್ಗಾ ನಿರ್ಮಿಸಿದ್ದಾರೆ.</p><p>ದರ್ಗಾದ ಗುಂಬಜ್ 15 ಅಡಿ ಎತ್ತರವಿದೆ. ನಾಲ್ಕು ಮಿನಾರು ಹೊಂದಿದೆ. ದರ್ಗಾಕ್ಕೆ 5.5 ಕೆ.ಜಿ ತೂಕದ ಬೆಳ್ಳಿ ಕುದುರೆಯನ್ನು ಅರ್ಪಿಸಿ, ಶೀಘ್ರವೇ ಉದ್ಘಾಟನೆ ನೆರವೇರಿಸುವ ತೀರ್ಮಾನ ಮಾಡಿದ್ದಾರೆ. </p><p>ಶಾಂತಿಯಮ್ಮ 25 ವರ್ಷಗಳ ಹಿಂದೆ ಮುಂಬೈನಿಂದ ಹಣ್ಣಿಕೇರಾಕ್ಕೆ ಬಂದು ನೆಲೆನಿಂತರು. ಬೆಟ್ಟದ ಮೇಲೆ ಕೋಮು ಸೌಹಾರ್ದದ ಪ್ರತೀಕವಾಗಿ ದರ್ಗಾ ಮತ್ತು ದೇವಸ್ಥಾನ ನಿರ್ಮಿಸುವ ಬಯಕೆಯನ್ನು ಗ್ರಾಮಸ್ಥರ ಎದುರು ಇಟ್ಟಾಗ, ಸ್ಥಳೀಯರಿಂದ ಪ್ರೋತ್ಸಾಹದ ಬದಲು ಅಪಹಾಸ್ಯ ಎದುರಾಗಿತ್ತು. </p><p>ಇದನ್ನೇ ಸವಾಲಾಗಿ ಸ್ವೀಕರಿಸಿ 2023ರಲ್ಲಿ ದರ್ಗಾ ನಿರ್ಮಿಸಲು ಅಣಿಯಾದರು. ಹಣ್ಣಿಕೇರಾ ಮತ್ತು ಕರದಾಳ ರಸ್ತೆಗೆ ಹೊಂದಿಕೊಂಡ ಅಂದಾಜು 550 ಅಡಿ ಎತ್ತರದ ಬೆಟ್ಟದ ಮೇಲೆ ದರ್ಗಾ ನಿರ್ಮಿಸಲು ಆರಂಭಿಸಿದರು. ಅವರಿಗೆ ಬೆಟ್ಟದ ತುದಿಗೆ ಸಾಮಗ್ರಿಯನ್ನು ಸಾಗಿಸುವುದೇ ಕಠಿಣವಾಯಿತು.</p><p>ನಿರ್ಮಾಣ ವೆಚ್ಚ ಅಂದಾಜನ್ನು ಮೀರಿ ದರೂ ಛಲ ಬಿಡಲಿಲ್ಲ. ಅಂತಿಮವಾಗಿ 2024ರ ಮೇ ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.</p><p>‘ದರ್ಗಾ ಗಮನ ಸೆಳೆಯುತ್ತಿದೆ. ಶಾಂತಿಯಮ್ಮ ಅವರ ಕಾರ್ಯ ಶ್ಲಾಘನೀಯ’ ಎನ್ನುತ್ತಾರೆ ಕರದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬೇಗಂ, ಸ್ಥಳೀಯ ಮುಖಂಡ ಮಲ್ಲಣ್ಣಗೌಡ ಮಾಲಿಪಾಟೀಲ.</p><p>ಗ್ರಾಮದಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುವ ಶಾಂತಿಯಮ್ಮ, ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೂ ಕೈ ಜೋಡಿಸಿದ್ದಾರೆ.</p><p><strong>‘ದೇಗುಲವನ್ನೂ ನಿರ್ಮಿಸುತ್ತೇನೆ’</strong></p><p>‘ಪ್ರತಿ ವರ್ಷ ಮೊಹರಂ ವೇಳೆ ಹಣ್ಣಿಕೇರಾ ಗ್ರಾಮಕ್ಕೆ ಬರುತ್ತಿದ್ದೆ. ಇದನ್ನೇ ತವರಾಗಿಸಿ ಕೊಂಡಿದ್ದೇನೆ. ದರ್ಗಾ ನಿರ್ಮಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ್ದೇನೆ. ಕಾಳಿಕಾ ಮತ್ತು ಮಲ್ಲಯ್ಯ ದೇವಸ್ಥಾನ ನಿರ್ಮಿಸುವ ಉದ್ದೇಶವಿದೆ. ಕೆಲಸ ಮಾಡಿ ಬಂದ ಹಣವನ್ನು ಸಮಾಜಸೇವೆಗಾಗಿ ವ್ಯಯಿಸಿದ್ದೇನೆ’ ಎನ್ನುತ್ತಾರೆ ಶಾಂತಿಯಮ್ಮ.</p><p>‘ಹಣ್ಣಿಕೇರಾದ ಈ ಬೆಟ್ಟ ನಾಡಿನ ತುಂಬಾ ಕೋಮುಸೌಹಾರ್ದಕ್ಕೆ ಹೆಸರು ಮಾಡಲಿ. ಹಿಂದೂ–ಮುಸ್ಲಿಂ ಸಹೋದರರು ಸಹಬಾಳ್ವೆ ನಡೆಸಲಿ’ ಎಂದು ಆಶಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ (ಕಲಬುರಗಿ ಜಿಲ್ಲೆ):</strong> ನಿಂದನೆ, ಅಪಹಾಸ್ಯದ ನಡುವೆ ಜೀವನ ಪ್ರೀತಿಯನ್ನು ಉಳಿಸಿಕೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ₹65 ಲಕ್ಷ ವೆಚ್ಚದಲ್ಲಿ ದರ್ಗಾ ಕಟ್ಟಿಸಿದ್ದಾರೆ.</p><p>ಇವರು, ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ಗ್ರಾಮದ ನಿವಾಸಿ ಶಾಂತಿಯಮ್ಮ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಭಿಮಾನಿ ಯೂ ಹೌದು. ಮುಂಬೈನಲ್ಲಿದ್ದ ಸ್ವಂತ ಮನೆಯನ್ನು ಮಾರಿ, ಆ ಹಣದಲ್ಲಿ ಗ್ರಾಮವ್ಯಾಪ್ತಿಯ ಕಡಿದಾದ ಬೆಟ್ಟದ ಮೇಲೆ ಹಜರತ್ ಮೌಲಾಲಿ ದರ್ಗಾ ನಿರ್ಮಿಸಿದ್ದಾರೆ.</p><p>ದರ್ಗಾದ ಗುಂಬಜ್ 15 ಅಡಿ ಎತ್ತರವಿದೆ. ನಾಲ್ಕು ಮಿನಾರು ಹೊಂದಿದೆ. ದರ್ಗಾಕ್ಕೆ 5.5 ಕೆ.ಜಿ ತೂಕದ ಬೆಳ್ಳಿ ಕುದುರೆಯನ್ನು ಅರ್ಪಿಸಿ, ಶೀಘ್ರವೇ ಉದ್ಘಾಟನೆ ನೆರವೇರಿಸುವ ತೀರ್ಮಾನ ಮಾಡಿದ್ದಾರೆ. </p><p>ಶಾಂತಿಯಮ್ಮ 25 ವರ್ಷಗಳ ಹಿಂದೆ ಮುಂಬೈನಿಂದ ಹಣ್ಣಿಕೇರಾಕ್ಕೆ ಬಂದು ನೆಲೆನಿಂತರು. ಬೆಟ್ಟದ ಮೇಲೆ ಕೋಮು ಸೌಹಾರ್ದದ ಪ್ರತೀಕವಾಗಿ ದರ್ಗಾ ಮತ್ತು ದೇವಸ್ಥಾನ ನಿರ್ಮಿಸುವ ಬಯಕೆಯನ್ನು ಗ್ರಾಮಸ್ಥರ ಎದುರು ಇಟ್ಟಾಗ, ಸ್ಥಳೀಯರಿಂದ ಪ್ರೋತ್ಸಾಹದ ಬದಲು ಅಪಹಾಸ್ಯ ಎದುರಾಗಿತ್ತು. </p><p>ಇದನ್ನೇ ಸವಾಲಾಗಿ ಸ್ವೀಕರಿಸಿ 2023ರಲ್ಲಿ ದರ್ಗಾ ನಿರ್ಮಿಸಲು ಅಣಿಯಾದರು. ಹಣ್ಣಿಕೇರಾ ಮತ್ತು ಕರದಾಳ ರಸ್ತೆಗೆ ಹೊಂದಿಕೊಂಡ ಅಂದಾಜು 550 ಅಡಿ ಎತ್ತರದ ಬೆಟ್ಟದ ಮೇಲೆ ದರ್ಗಾ ನಿರ್ಮಿಸಲು ಆರಂಭಿಸಿದರು. ಅವರಿಗೆ ಬೆಟ್ಟದ ತುದಿಗೆ ಸಾಮಗ್ರಿಯನ್ನು ಸಾಗಿಸುವುದೇ ಕಠಿಣವಾಯಿತು.</p><p>ನಿರ್ಮಾಣ ವೆಚ್ಚ ಅಂದಾಜನ್ನು ಮೀರಿ ದರೂ ಛಲ ಬಿಡಲಿಲ್ಲ. ಅಂತಿಮವಾಗಿ 2024ರ ಮೇ ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.</p><p>‘ದರ್ಗಾ ಗಮನ ಸೆಳೆಯುತ್ತಿದೆ. ಶಾಂತಿಯಮ್ಮ ಅವರ ಕಾರ್ಯ ಶ್ಲಾಘನೀಯ’ ಎನ್ನುತ್ತಾರೆ ಕರದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬೇಗಂ, ಸ್ಥಳೀಯ ಮುಖಂಡ ಮಲ್ಲಣ್ಣಗೌಡ ಮಾಲಿಪಾಟೀಲ.</p><p>ಗ್ರಾಮದಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುವ ಶಾಂತಿಯಮ್ಮ, ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೂ ಕೈ ಜೋಡಿಸಿದ್ದಾರೆ.</p><p><strong>‘ದೇಗುಲವನ್ನೂ ನಿರ್ಮಿಸುತ್ತೇನೆ’</strong></p><p>‘ಪ್ರತಿ ವರ್ಷ ಮೊಹರಂ ವೇಳೆ ಹಣ್ಣಿಕೇರಾ ಗ್ರಾಮಕ್ಕೆ ಬರುತ್ತಿದ್ದೆ. ಇದನ್ನೇ ತವರಾಗಿಸಿ ಕೊಂಡಿದ್ದೇನೆ. ದರ್ಗಾ ನಿರ್ಮಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ್ದೇನೆ. ಕಾಳಿಕಾ ಮತ್ತು ಮಲ್ಲಯ್ಯ ದೇವಸ್ಥಾನ ನಿರ್ಮಿಸುವ ಉದ್ದೇಶವಿದೆ. ಕೆಲಸ ಮಾಡಿ ಬಂದ ಹಣವನ್ನು ಸಮಾಜಸೇವೆಗಾಗಿ ವ್ಯಯಿಸಿದ್ದೇನೆ’ ಎನ್ನುತ್ತಾರೆ ಶಾಂತಿಯಮ್ಮ.</p><p>‘ಹಣ್ಣಿಕೇರಾದ ಈ ಬೆಟ್ಟ ನಾಡಿನ ತುಂಬಾ ಕೋಮುಸೌಹಾರ್ದಕ್ಕೆ ಹೆಸರು ಮಾಡಲಿ. ಹಿಂದೂ–ಮುಸ್ಲಿಂ ಸಹೋದರರು ಸಹಬಾಳ್ವೆ ನಡೆಸಲಿ’ ಎಂದು ಆಶಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>