ಕೆಲ ತಿಂಗಳ ಬಳಿಕ ರವಿ ಅವರು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಅವರ ತಂದೆಯು, ಸೊಸೆ ಲಕ್ಷ್ಮಿ ಬಳಿ ಕೇಳುತ್ತಲೇ ಇದ್ದರು. ಪದೇಪದೇ ಒತ್ತಡ ಹೇರಿದಾಗ ‘ಪತಿ ರವಿಯನ್ನು ನಾನು ಮತ್ತು ಸುಮನ್ ಸೇರಿ ಮೊಗದಂಪುರ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿದ್ದೇವೆ’ ಎಂದು ಲಕ್ಷ್ಮಿ ಬಾಯಿ ಬಿಟ್ಟಿದ್ದಾರೆ. ರವಿ ತಂದೆ ಪೀರ್ಯಾ ಬದ್ಯಾ ಪತ್ಲಾವತ್ (ರಾಠೋಡ) ಅವರು ಕುಂಚಾವರಂ ಠಾಣೆಲ್ಲಿ ಸೊಸೆ ಲಕ್ಷ್ಮಿ ಮತ್ತು ಪ್ರಿಯಕರ ಸುಮನ್ ವಿರುದ್ಧ ದೂರು ನೀಡಿದ್ದರು.