ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ನಗರ ಬಸ್ ಉದ್ಘಾಟನೆ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಸಿ ಸ್ಲೀಪರ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು
ನಾನು ಕೆಕೆಆರ್ಡಿಬಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಂಡಳಿಯಿಂದ ₹ 5 ಕೋಟಿ ಬಿಡುಗಡೆ ಮಾಡಿಸಿ ನಗರ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಮತ್ತೆ ₹ 15 ಕೋಟಿ ನೀಡಿದ್ದರಿಂದ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದೆ
ಡಾ. ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಕಳೆದ ವರ್ಷ ಮಂಡಳಿಯಿಂದ ಬಸ್ ಖರೀದಿಗೆ ₹ 45 ಕೋಟಿ ಒದಗಿಸಿದ್ದೆವು. ಈ ಬಾರಿ ಮತ್ತೆ ₹ 50 ಕೋಟಿ ನೀಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಸಾರಿಗೆ ನಿಗಮ ₹ 100 ಕೋಟಿ ಕೊಟ್ಟರೆ ಹೆಚ್ಚು ಬಸ್ ಖರೀದಿಸಬಹುದು
ಡಾ. ಅಜಯ್ ಸಿಂಗ್ ಕೆಕೆಆರ್ಡಿಬಿ ಅಧ್ಯಕ್ಷ
ಕೆಕೆಆರ್ಡಿಬಿಯಿಂದ ಬಸ್ಗಳ ಖರೀದಿಗೆ ಶೇ 50ರಷ್ಟು ವೆಚ್ಚ ಭರಿಸಿದರೆ ನಾವು ಉಳಿದ ಶೇ 50 ಭರಿಸುತ್ತೇವೆ. ಈ ಬಗ್ಗೆ ಮಂಡಳಿ ಅಧ್ಯಕ್ಷರು ಉದಾರವಾಗಿ ಹಣ ನೀಡಬೇಕು
ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
20 ಐಷಾರಾಮಿ ಬಸ್ ಲೋಕಾರ್ಪಣೆ
ಸಮಾರಂಭಕ್ಕೂ ಮುನ್ನ ಸಚಿವ ರಾಮಲಿಂಗಾರೆಡ್ಡಿ ಅವರು 6 ಕಲ್ಯಾಣ ರಥ ಎಂಬ ವೋಲ್ವೊ ಎಸಿ ಸ್ಲೀಪರ್ ಬಸ್ ಹಾಗೂ 14 ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್ಸುಗಳನ್ನು ಲೋಕಾರ್ಪಣೆ ಮಾಡಿದರು. ಎಸಿ ವೋಲ್ವೊ ಬಸ್ ಕಲಬುರಗಿ–ಬೆಂಗಳೂರು ವಿಜಯಪುರ–ಬೆಂಗಳೂರು ಮಧ್ಯೆ ಕಾರ್ಯಾಚರಣೆ ಪ್ರಾರಂಭಿಸಲಿದೆ. ಇತ್ತೀಚೆಗೆ ನಿಗಮಕ್ಕೆ ಸೇರ್ಪಡೆಯಾದ ಎಸಿ ಬಸ್ಗಳನ್ನು ಮೊದಲ ಬಾರಿಗೆ ಸಿಂಧನೂರು–ಬೆಂಗಳೂರು ಮಧ್ಯೆ ಸೇವೆಗೆ ನಿಯೋಜಿಸಲಾಗಿತ್ತು. ಇದೀಗ ಕಲಬುರಗಿ ವಿಜಯಪುರ ಜಿಲ್ಲೆಯ ಜನತೆಗೂ ಐಷಾರಾಮಿ ಎಸಿ ಬಸ್ ಸೌಲಭ್ಯ ಸಿಕ್ಕಂತಾಗಿದೆ.