ಖಮಾರ್ ಅವರು ತಕ್ಷಣವೇ ತಮ್ಮ ಸಮುದಾಯದ ಮುಖಂಡರಿಗೆ ಫೋನ್ ಕರೆ ಮಾಡಿದರು. ಮುಖಂಡರಾದ ಅಷ್ಪಾ ಅಹಮದ್, ವಸೀಮ್ ಶೇಖ್, ವಾಜೀದ್ ಶೇಖ್ ಮತ್ತು ಶೇಖ್ ಸೈಫಾನ್ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಪಟಾಕಿಯಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಕಾಗದದ ಚೂರುಗಳನ್ನು ಬಳಸಲಾಗಿದೆ. ಇದರಿಂದ ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ತೀವ್ರ ನೋವು ತರಿಸಿದೆ. ಧರ್ಮದ ಪುಸ್ತಕವನ್ನು ಹರಿದು, ಅದರ ಹಾಳೆಗಳನ್ನು ಪಟಾಕಿಗಳಲ್ಲಿ ಬಳಸಿದ ಪಟಾಕಿ ತಯಾರಿಕಾ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.