<p><strong>ಕಾಳಗಿ</strong>: ಭಾರತ ದೇಶದ ವಿವಿಧೆಡೆ 33 ವರ್ಷ ಸಿಆರ್ಪಿಎಫ್ ಯೋಧನಾಗಿ ಸೇವೆ ಸಲ್ಲಿಸಿ ಈಚೆಗೆ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳಿದ ತಾಲ್ಲೂಕಿನ ವಜೀರಗಾಂವ ಗ್ರಾಮದ ರೇವಣಸಿದ್ದಪ್ಪ ಸಂಬಣ್ಣ ಸುಬೇದಾರ ಅವರನ್ನು ಗ್ರಾಮಸ್ಥರು ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಿದರು.</p>.<p>ಜಮ್ಮು, ಹರಿಯಾಣ, ಕಾಶ್ಮೀರ, ದಿಲ್ಲಿ, ಉತ್ತರಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಜಾರ್ಖಂಡ್, ಛತ್ತೀಸ್ಘಡ, ಪಶ್ಚಿಮಬಂಗಾಳ ಮತ್ತು ಒಡಿಸ್ಸಾದಲ್ಲಿ ಸೇವೆ ಸಲ್ಲಿಸಿ ಹಿಂದಿರುಗಿದ ಅವರನ್ನು ಹೊಸಳ್ಳಿ ಕ್ರಾಸ್ ನಿಂದ ವಜೀರಗಾಂವ ಗ್ರಾಮದವರೆಗೆ ಪತ್ನಿ, ಶಿಕ್ಷಕಿ ಅಂಜನಾದೇವಿ ಜತೆಯಲ್ಲಿ ಹಲಗೆ, ಡೊಳ್ಳು, ಭಾಜಾ ಬಜಂತ್ರಿ ವಾದ್ಯಮೇಳದೊಂದಿಗೆ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿದರು.</p>.<p>ನಿವೃತ್ತ ಯೋಧ ಹುಟ್ಟೂರೊಳಗೆ ಕಾಲಿಡುತ್ತಿದ್ದಂತೆ ಮಹಿಳೆಯರು ಆರುತಿ ಬೆಳಗಿದರು. ಮೆರವಣಿಗೆ ಮಧ್ಯೆ ಜೈಕಾರ ಮೊಳಗಿದವು. ಬಳಿಕ ನಡೆದ ಸಮಾರಂಭದಲ್ಲಿ ಅನೇಕ ಹಿರಿಯರು, ಮುಖಂಡರು, ಅಧಿಕಾರಿಗಳು, ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.</p>.<p>ರೇವಣಸಿದ್ದಪ್ಪ ಸಂಬಣ್ಣ ಸುಬೇದಾರಮಾತನಾಡಿ, ‘ಮನೆ ಮಂದಿ, ಬಂಧು-ಬಳಗ ಬಿಟ್ಟು ದೇಶದ ಸೇವೆ ಮಾಡಿದ್ದಕ್ಕೆ ಈ ದಿನ ತಾವು ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದೇನೆ. ನಾನೀಗ ಸ್ವಯಂ ನಿವೃತ್ತಿ ಪಡೆದಿದ್ದರೂ ದೇಶಕ್ಕಾಗಿ ಅಗತ್ಯ ಎನಿಸಿದರೆ ಯಾವುದೇ ಸಂದರ್ಭದಲ್ಲಿ ದುಡಿಯಲು ಸಿದ್ಧನಿದ್ದೇನೆ. ನಮ್ಮ ಸೇನೆಯನ್ನು ಹೊರಗಿನ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲದಷ್ಠು ಬಲಿಷ್ಠವಾಗಿದೆ’ ಎಂದರು.</p>.<p>ನಿವೃತ್ತ ಯೋಧನ ವಿದ್ಯಾಗುರುಗಳಾದ ಜಗನ್ನಾಥರೆಡ್ಡಿ ಪೊಂಗ, ಶರಣಪ್ಪ ಕೆರೊಳ್ಳಿ, ಪರ್ವತಯ್ಯ ಸಪಗೋಳ, ಹಿರಿಯ ಮುಖಂಡ ನೀಲಕಂಠಪ್ಪ ಗೌಡ, ಕೃಷಿ ಸಹಾಯಕ ನಿರ್ದೇಶಕ ಅನಿಲಕುಮಾರ ರಾಠೋಡ, ಅಭಿಲಾಷ್ ಸುಬೇದಾರ, ಪ್ರಕಾಶ ರಾಠೋಡ, ಭೀಮರೆಡ್ಡಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ಭಾರತ ದೇಶದ ವಿವಿಧೆಡೆ 33 ವರ್ಷ ಸಿಆರ್ಪಿಎಫ್ ಯೋಧನಾಗಿ ಸೇವೆ ಸಲ್ಲಿಸಿ ಈಚೆಗೆ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳಿದ ತಾಲ್ಲೂಕಿನ ವಜೀರಗಾಂವ ಗ್ರಾಮದ ರೇವಣಸಿದ್ದಪ್ಪ ಸಂಬಣ್ಣ ಸುಬೇದಾರ ಅವರನ್ನು ಗ್ರಾಮಸ್ಥರು ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಿದರು.</p>.<p>ಜಮ್ಮು, ಹರಿಯಾಣ, ಕಾಶ್ಮೀರ, ದಿಲ್ಲಿ, ಉತ್ತರಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಜಾರ್ಖಂಡ್, ಛತ್ತೀಸ್ಘಡ, ಪಶ್ಚಿಮಬಂಗಾಳ ಮತ್ತು ಒಡಿಸ್ಸಾದಲ್ಲಿ ಸೇವೆ ಸಲ್ಲಿಸಿ ಹಿಂದಿರುಗಿದ ಅವರನ್ನು ಹೊಸಳ್ಳಿ ಕ್ರಾಸ್ ನಿಂದ ವಜೀರಗಾಂವ ಗ್ರಾಮದವರೆಗೆ ಪತ್ನಿ, ಶಿಕ್ಷಕಿ ಅಂಜನಾದೇವಿ ಜತೆಯಲ್ಲಿ ಹಲಗೆ, ಡೊಳ್ಳು, ಭಾಜಾ ಬಜಂತ್ರಿ ವಾದ್ಯಮೇಳದೊಂದಿಗೆ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿದರು.</p>.<p>ನಿವೃತ್ತ ಯೋಧ ಹುಟ್ಟೂರೊಳಗೆ ಕಾಲಿಡುತ್ತಿದ್ದಂತೆ ಮಹಿಳೆಯರು ಆರುತಿ ಬೆಳಗಿದರು. ಮೆರವಣಿಗೆ ಮಧ್ಯೆ ಜೈಕಾರ ಮೊಳಗಿದವು. ಬಳಿಕ ನಡೆದ ಸಮಾರಂಭದಲ್ಲಿ ಅನೇಕ ಹಿರಿಯರು, ಮುಖಂಡರು, ಅಧಿಕಾರಿಗಳು, ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.</p>.<p>ರೇವಣಸಿದ್ದಪ್ಪ ಸಂಬಣ್ಣ ಸುಬೇದಾರಮಾತನಾಡಿ, ‘ಮನೆ ಮಂದಿ, ಬಂಧು-ಬಳಗ ಬಿಟ್ಟು ದೇಶದ ಸೇವೆ ಮಾಡಿದ್ದಕ್ಕೆ ಈ ದಿನ ತಾವು ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದೇನೆ. ನಾನೀಗ ಸ್ವಯಂ ನಿವೃತ್ತಿ ಪಡೆದಿದ್ದರೂ ದೇಶಕ್ಕಾಗಿ ಅಗತ್ಯ ಎನಿಸಿದರೆ ಯಾವುದೇ ಸಂದರ್ಭದಲ್ಲಿ ದುಡಿಯಲು ಸಿದ್ಧನಿದ್ದೇನೆ. ನಮ್ಮ ಸೇನೆಯನ್ನು ಹೊರಗಿನ ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲದಷ್ಠು ಬಲಿಷ್ಠವಾಗಿದೆ’ ಎಂದರು.</p>.<p>ನಿವೃತ್ತ ಯೋಧನ ವಿದ್ಯಾಗುರುಗಳಾದ ಜಗನ್ನಾಥರೆಡ್ಡಿ ಪೊಂಗ, ಶರಣಪ್ಪ ಕೆರೊಳ್ಳಿ, ಪರ್ವತಯ್ಯ ಸಪಗೋಳ, ಹಿರಿಯ ಮುಖಂಡ ನೀಲಕಂಠಪ್ಪ ಗೌಡ, ಕೃಷಿ ಸಹಾಯಕ ನಿರ್ದೇಶಕ ಅನಿಲಕುಮಾರ ರಾಠೋಡ, ಅಭಿಲಾಷ್ ಸುಬೇದಾರ, ಪ್ರಕಾಶ ರಾಠೋಡ, ಭೀಮರೆಡ್ಡಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>