ಅವರು ಪೇಠ ಫಿರೋಜಾಬಾದ್ ಗ್ರಾಮದ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಧರ್ಮಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಆಶೀರ್ವಚನದಲ್ಲಿ ದೇವರು ಕೊಟ್ಟ ಅನ್ನ, ಗಾಳಿ, ನೀರು, ಸೇವಿಸಿದ ನಾವು ಭಗವಂತನ ಸ್ಮರಣೆ ಮಾಡಬೇಕು. ದೇವರು ಕೊಟ್ಟ ಗಾಳಿ, ನೀರು, ಆಹಾರ ಕೆಟ್ಟಿಲ್ಲ. ಆದರೆ ನಮ್ಮ ಮನಸ್ಸು ಕೆಟ್ಟಿವೆ, ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿ ಇಲ್ಲ, ಮೈಯನ್ನು ಮಾತ್ರ ಬೆಳೆಸಿದರೆ ಸಾಲದು, ಬುದ್ಧಿ, ಮನಸ್ಸು ಬೆಳೆಯಬೇಕು. ಸುಖ ದುಃಖ ಯಾರನ್ನೂ ಬಿಟ್ಟಿಲ್ಲ. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಸಮತೋಲನದಲ್ಲಿ ಬದುಕಿ ಬಾಳುವುದೇ ಮನುಷ್ಯನ ಗುರಿ. ಕಷ್ಟಗಳನ್ನು ಎದುರಿಸಲು ಧೈರ್ಯ ಮತ್ತು ಸಹನೆ ಗುಣಗಳು ಅವಶ್ಯಕ ಎಂದು ನುಡಿದರು.