ಆಳಂದ ತಾಲ್ಲೂಕಿನ ಅಮರ್ಜಾ ಅಣೆಕಟ್ಟೆಯಿಂದ ಪಟ್ಟಣಕ್ಕೆ ನೀರು ಸರಬರಾಜು ಕೈಗೊಳ್ಳುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೂಮಿಪೂಜೆ ನೆರವೇರಿಸಿದರು. ಬಿ.ಆರ್.ಪಾಟೀಲ ಎಂ.ವೈ.ಪಾಟೀಲ ಜಗದೇವ ಗುತ್ತೇದಾರ ಫೌಜಿಯಾ ತರನ್ನುಮ್ ಉಪಸ್ಥಿತರಿದ್ದರು
ಆಳಂದ ತಾಲ್ಲೂಕಿನಲ್ಲಿ ಸಿರಪುರ ಮಾದರಿ ಕಾಮಗಾರಿ ಮುಂದುವರಿಸಲು ₹200 ಕೋಟಿ ಅನುದಾನದ ಅಗತ್ಯವಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂಪೂರ್ಣ ಜಲ ಸಂವರ್ಧನೆ ಕಾಮಗಾರಿ ಕೈಗೊಳ್ಳಲಾಗುವುದು
ಬಿ.ಆರ್.ಪಾಟೀಲ ಶಾಸಕ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನೋಪಯೋಗಿಯಾಗಿವೆ. ಬಿಜೆಪಿಯವರೇ ಈಗ ಹೆಚ್ಚು ನಮ್ಮ ಗ್ಯಾರಂಟಿ ಫಲಾನುಭವಿಗಳು. ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು ಜನರಿಗೆ ಯಶಸ್ವಿಯಾಗಿ ತಲುಪಿವೆ
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಇದು ನನ್ನ ಕೊನೆಯ ಚುನಾವಣೆ. ಮುಂದೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ ಬಿ.ಆರ್.ಪಾಟೀಲರು ಇನ್ನೂ ಸಮರ್ಥರಾಗಿದ್ದು ಅವರು ರಾಜಕಾರಣದಲ್ಲಿ ಮುಂದುವರಿಯಬೇಕು. ಅವರಿಂದ ಹೊಸ ಅಭಿವೃದ್ಧಿ ಕಾರ್ಯ ಜರುಗಲಿವೆ