<p><strong>ಕಲಬುರ್ಗಿ:</strong> ಮದುವೆಯಾಗುವುದಾಗಿ ಭರವಸೆ ನೀಡಿ ಕೈಕೊಟ್ಟು ಸ್ವಗ್ರಾಮ ಕಲಬುರ್ಗಿ ತಾಲ್ಲೂಕಿನ ಪಟ್ಟಣಕ್ಕೆ ಬಂದಿದ್ದ ಯುವಕನನ್ನು ಬೆಂಗಳೂರಿನಿಂದ ಹುಡುಕಿಕೊಂಡ ಯುವತಿ ಇಲ್ಲಿನ ಗ್ರಾಮೀಣ ಠಾಣೆ ಎದುರೇ ಭಾನುವಾರ ಥಳಿಸಿದ್ದಾಳೆ. ಈ ಕುರಿತ ವಿಡಿಯೊ ವೈರಲ್ ಆಗಿದೆ.</p>.<p>ಪಟ್ಟಣದ ನಿವಾಸಿ ಇರ್ಫಾನ್ ಎಂಬಾತ ಬೆಂಗಳೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಯುವತಿಯೊಂದಿಗೆ ಸ್ನೇಹ ಸಂಪಾದಿಸಿದ್ದ. ನಂತರ ಪ್ರೀತಿಗೆ ತಿರುಗಿತ್ತು. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮದುವೆಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದರು.</p>.<p>ಲಾಕ್ಡೌನ್ ಇದ್ದುದರಿಂದ ಊರಿಗೆ ವಾಪಸಾಗಿದ್ದ ಇರ್ಫಾನ್ ವಾಪಸ್ ಬೆಂಗಳೂರಿಗೆ ಹೋಗಿರಲಿಲ್ಲ. ಆದರೆ, ಈತನಿಗಾಗಿ ಕಾಯುತ್ತಿದ್ದ ಯುವತಿ ಹುಡುಕಿಕೊಂಡು ಕಲಬುರ್ಗಿಗೆ ಬಂದಿದ್ದಳು.</p>.<p>‘ಮದುವೆಯಾಗು ಎಂದಾಗ ನನ್ನ ನಡತೆ ಸರಿ ಇಲ್ಲ’ ಎಂದು ಹೇಳಿದ ಎಂದು ರೊಚ್ಚಿಗೆದ್ದ ಯುವತಿ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಲು ಗ್ರಾಮೀಣ ಪೊಲೀಸ್ ಠಾಣೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಇರ್ಫಾನ್ ಬಂದಾಗ ಸಿಟ್ಟಿಗೆದ್ದ ಯುವತಿ ನಡತೆ ಸರಿ ಇಲ್ಲ ಎನ್ನುತ್ತೀಯಾ ಎಂದು ಥಳಿಸುತ್ತಿರುವುದು ವಿಡಿಯೊದಲ್ಲಿದೆ.</p>.<p>ಈ ಬಗ್ಗೆ ಇಬ್ಬರನ್ನೂ ಪೊಲೀಸರು ಕರೆಸಿ ಮಾತನಾಡಿದರು. ದೂರು ನೀಡಲು ಮಹಿಳಾ ಠಾಣೆಗೆ ಕಳುಹಿಸಿದರು ಎಂದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ಮದುವೆಯಾಗುವುದಾಗಿ ಭರವಸೆ ನೀಡಿ ಕೈಕೊಟ್ಟು ಸ್ವಗ್ರಾಮ ಕಲಬುರ್ಗಿ ತಾಲ್ಲೂಕಿನ ಪಟ್ಟಣಕ್ಕೆ ಬಂದಿದ್ದ ಯುವಕನನ್ನು ಬೆಂಗಳೂರಿನಿಂದ ಹುಡುಕಿಕೊಂಡ ಯುವತಿ ಇಲ್ಲಿನ ಗ್ರಾಮೀಣ ಠಾಣೆ ಎದುರೇ ಭಾನುವಾರ ಥಳಿಸಿದ್ದಾಳೆ. ಈ ಕುರಿತ ವಿಡಿಯೊ ವೈರಲ್ ಆಗಿದೆ.</p>.<p>ಪಟ್ಟಣದ ನಿವಾಸಿ ಇರ್ಫಾನ್ ಎಂಬಾತ ಬೆಂಗಳೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಯುವತಿಯೊಂದಿಗೆ ಸ್ನೇಹ ಸಂಪಾದಿಸಿದ್ದ. ನಂತರ ಪ್ರೀತಿಗೆ ತಿರುಗಿತ್ತು. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮದುವೆಯಾಗುವ ನಿಟ್ಟಿನಲ್ಲಿ ಬೆಂಗಳೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದರು.</p>.<p>ಲಾಕ್ಡೌನ್ ಇದ್ದುದರಿಂದ ಊರಿಗೆ ವಾಪಸಾಗಿದ್ದ ಇರ್ಫಾನ್ ವಾಪಸ್ ಬೆಂಗಳೂರಿಗೆ ಹೋಗಿರಲಿಲ್ಲ. ಆದರೆ, ಈತನಿಗಾಗಿ ಕಾಯುತ್ತಿದ್ದ ಯುವತಿ ಹುಡುಕಿಕೊಂಡು ಕಲಬುರ್ಗಿಗೆ ಬಂದಿದ್ದಳು.</p>.<p>‘ಮದುವೆಯಾಗು ಎಂದಾಗ ನನ್ನ ನಡತೆ ಸರಿ ಇಲ್ಲ’ ಎಂದು ಹೇಳಿದ ಎಂದು ರೊಚ್ಚಿಗೆದ್ದ ಯುವತಿ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಲು ಗ್ರಾಮೀಣ ಪೊಲೀಸ್ ಠಾಣೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಇರ್ಫಾನ್ ಬಂದಾಗ ಸಿಟ್ಟಿಗೆದ್ದ ಯುವತಿ ನಡತೆ ಸರಿ ಇಲ್ಲ ಎನ್ನುತ್ತೀಯಾ ಎಂದು ಥಳಿಸುತ್ತಿರುವುದು ವಿಡಿಯೊದಲ್ಲಿದೆ.</p>.<p>ಈ ಬಗ್ಗೆ ಇಬ್ಬರನ್ನೂ ಪೊಲೀಸರು ಕರೆಸಿ ಮಾತನಾಡಿದರು. ದೂರು ನೀಡಲು ಮಹಿಳಾ ಠಾಣೆಗೆ ಕಳುಹಿಸಿದರು ಎಂದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>