<p><strong>ಕಲಬುರ್ಗಿ: </strong>ಕೋರಂಟಿ ಹನುಮಾನ್ ದೇವಸ್ಥಾನದ ಹತ್ತಿರ ಆಯುರ್ವೇದಿಕ್ ಕ್ಲಿನಿಕ್ ಹೊಂದಿರುವಡಾ.ನಾಗನಾಥ ವಿ.ಯಾದ್ಗಿರ್ ಅವರಿಗೆ ಜನರು ಪ್ರೀತಿಯಿಂದ ‘ಸಸಿಗಳ ಡಾಕ್ಟರ್’ ಎಂದೇ ಕರೆಯುತ್ತಾರೆ.</p>.<p>ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ವೈದ್ಯಕೀಯ ಸೇವೆ ಸಲ್ಲಿಸುವ ಅವರು ಮಧ್ಯಾಹ್ನದ ಬಿಡುವಿನಲ್ಲಿ ಸಸಿಗಳ ಆರೈಕೆಗೆ ಮುಂದಾಗುವ ಕಾರಣ ಈ ಹೆಸರು ಬಂದಿದೆ.</p>.<p>ಜೇಮ್ಶೇಡ್ ನಗರ, ಅಂಬಿಕಾ ನಗರ, ತಾರಫೈಲ್ ಬಡಾವಣೆ, ಕರುಣೇಶ್ವರ ನಗರ, ಜೇವರ್ಗಿ ಕಾಲೊನಿ ಹಾಗೂ ಶರಣಸಿರಸಗಿ, ಬೇಲಕೂರು, ರೇವತಗಾಂವ ಮುಂತಾದ ಹಳ್ಳಿಗಳಲ್ಲೂ ಸಸಿ ನೆಟ್ಟು, ಅಕ್ಕಪಕ್ಕದ ಜನರಿಗೆ ಪೋಷಣೆಯ ಜವಾಬ್ದಾರಿ ವಹಿಸಿದ್ದಾರೆ.</p>.<p>ಹಲವು ವರ್ಷಗಳಿಂದ ಸ್ವಯಂ ಪ್ರೇರಣೆಯಿಂದ ಸಸಿ ಪೋಷಣೆಯಲ್ಲಿ ತೊಡಗಿರುವ ಇವರು, ಮೂರು ವರ್ಷಗಳ ಹಿಂದೆ ತಂಡ ಕಟ್ಟಿ, ಇನ್ನಷ್ಟು ಕ್ರಿಯಾಶೀಲಗೊಳಿಸಿದ್ದಾರೆ. ಅವರ ತಂಡಕ್ಕೆ ‘ಕಲ್ಲುನಾಡಿನ ಕಲಿಗಳು’ ಎಂದು ಹೆಸರಿಟ್ಟಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹವನ್ನು ಸೇರಿಸಿಕೊಳ್ಳುತ್ತಿದ್ದಾರೆ.</p>.<p>‘ಮುಂಚೆ ಸರ್ಕಾರದಿಂದ ರಿಯಾಯಿತಿಯಲ್ಲಿ ಸಸಿಗಳನ್ನು ಖರೀದಿಸಿ ಅಲ್ಲಲ್ಲಿ ನೆಡುತ್ತಿದ್ದೆವು.ಹಲವರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದೆವು. ಈಗ ನಮ್ಮದೇ ನರ್ಸರಿ ನಿರ್ಮಿಸಿ<br />ಕೊಂಡಿದ್ದೇವೆ.ಕಳೆದ ವರ್ಷ 20 ಸಾವಿರ ಸಸಿಗಳನ್ನು ವಿತರಣೆ ಮಾಡಿದ್ದೇವೆ’ ಎನ್ನುತ್ತಾರೆ ಅವರು.</p>.<p>ತಮ್ಮ ಕೆಲಸಕ್ಕೆ ಹೆಗಲಾಗಿ ನಿಂತ ಪತ್ನಿ ಡಾ.ಯಜ್ಞಶ್ರೀ ಹಾಗೂ ಯುವಜನರ ತಂಡದ ಶ್ರಮವನ್ನೂ ಅವರು ನೆನೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಕೋರಂಟಿ ಹನುಮಾನ್ ದೇವಸ್ಥಾನದ ಹತ್ತಿರ ಆಯುರ್ವೇದಿಕ್ ಕ್ಲಿನಿಕ್ ಹೊಂದಿರುವಡಾ.ನಾಗನಾಥ ವಿ.ಯಾದ್ಗಿರ್ ಅವರಿಗೆ ಜನರು ಪ್ರೀತಿಯಿಂದ ‘ಸಸಿಗಳ ಡಾಕ್ಟರ್’ ಎಂದೇ ಕರೆಯುತ್ತಾರೆ.</p>.<p>ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ವೈದ್ಯಕೀಯ ಸೇವೆ ಸಲ್ಲಿಸುವ ಅವರು ಮಧ್ಯಾಹ್ನದ ಬಿಡುವಿನಲ್ಲಿ ಸಸಿಗಳ ಆರೈಕೆಗೆ ಮುಂದಾಗುವ ಕಾರಣ ಈ ಹೆಸರು ಬಂದಿದೆ.</p>.<p>ಜೇಮ್ಶೇಡ್ ನಗರ, ಅಂಬಿಕಾ ನಗರ, ತಾರಫೈಲ್ ಬಡಾವಣೆ, ಕರುಣೇಶ್ವರ ನಗರ, ಜೇವರ್ಗಿ ಕಾಲೊನಿ ಹಾಗೂ ಶರಣಸಿರಸಗಿ, ಬೇಲಕೂರು, ರೇವತಗಾಂವ ಮುಂತಾದ ಹಳ್ಳಿಗಳಲ್ಲೂ ಸಸಿ ನೆಟ್ಟು, ಅಕ್ಕಪಕ್ಕದ ಜನರಿಗೆ ಪೋಷಣೆಯ ಜವಾಬ್ದಾರಿ ವಹಿಸಿದ್ದಾರೆ.</p>.<p>ಹಲವು ವರ್ಷಗಳಿಂದ ಸ್ವಯಂ ಪ್ರೇರಣೆಯಿಂದ ಸಸಿ ಪೋಷಣೆಯಲ್ಲಿ ತೊಡಗಿರುವ ಇವರು, ಮೂರು ವರ್ಷಗಳ ಹಿಂದೆ ತಂಡ ಕಟ್ಟಿ, ಇನ್ನಷ್ಟು ಕ್ರಿಯಾಶೀಲಗೊಳಿಸಿದ್ದಾರೆ. ಅವರ ತಂಡಕ್ಕೆ ‘ಕಲ್ಲುನಾಡಿನ ಕಲಿಗಳು’ ಎಂದು ಹೆಸರಿಟ್ಟಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹವನ್ನು ಸೇರಿಸಿಕೊಳ್ಳುತ್ತಿದ್ದಾರೆ.</p>.<p>‘ಮುಂಚೆ ಸರ್ಕಾರದಿಂದ ರಿಯಾಯಿತಿಯಲ್ಲಿ ಸಸಿಗಳನ್ನು ಖರೀದಿಸಿ ಅಲ್ಲಲ್ಲಿ ನೆಡುತ್ತಿದ್ದೆವು.ಹಲವರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದೆವು. ಈಗ ನಮ್ಮದೇ ನರ್ಸರಿ ನಿರ್ಮಿಸಿ<br />ಕೊಂಡಿದ್ದೇವೆ.ಕಳೆದ ವರ್ಷ 20 ಸಾವಿರ ಸಸಿಗಳನ್ನು ವಿತರಣೆ ಮಾಡಿದ್ದೇವೆ’ ಎನ್ನುತ್ತಾರೆ ಅವರು.</p>.<p>ತಮ್ಮ ಕೆಲಸಕ್ಕೆ ಹೆಗಲಾಗಿ ನಿಂತ ಪತ್ನಿ ಡಾ.ಯಜ್ಞಶ್ರೀ ಹಾಗೂ ಯುವಜನರ ತಂಡದ ಶ್ರಮವನ್ನೂ ಅವರು ನೆನೆಯುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>