<p><strong>ಗುಲ್ಬರ್ಗ: </strong>ಐದನೇ ದಿನವಾದ ಸೋಮವಾರವೂ ಎಲ್.ಪಿ.ಜಿ. (ಗ್ಯಾಸ್) ಸಾಗಿಸುವ ಟ್ಯಾಂಕರ್ಗಳ ಮುಷ್ಕರ ಮುಂದುವರಿದಿದ್ದು, ಇದೀಗ ಗುಲ್ಬರ್ಗ ನಗರದ ಎಲ್ಪಿಜಿ ಗ್ರಾಹಕರಿಗೂ ಮುಷ್ಕರದ ಬಿಸಿ ತಗುಲಿದೆ.<br /> <br /> ಮುಖ್ಯವಾಗಿ ಹಿಂದುಸ್ತಾನ ಪೆಟ್ರೋಲ್ (ಎಚ್ಪಿ) ಹಾಗೂ ಭಾರತ ಗ್ಯಾಸ್ ಗ್ರಾಹಕರು `ಗ್ಯಾಸ್ ಟ್ರಬಲ್~ ಎದುರಿಸುತ್ತಿದ್ದಾರೆ. ಸುಮಾರು 20 ದಿನಗಳ ಹಿಂದೆ ಬುಕಿಂಗ್ ಮಾಡಿದ್ದ ಗ್ರಾಹಕರಿಗೆ, ಮುಷ್ಕರ ಆರಂಭಗೊಂಡ ಮೂರನೇ ದಿನದವರೆಗೂ ಅನಿಲ ಸಿಲಿಂಡರ್ ಕೆಲವರಿಗೆ ತಲುಪಿದೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿದ ಗ್ರಾಹಕರ ಸಮಸ್ಯೆ ಹೇಳತೀರದಾಗಿದೆ.<br /> <br /> ಗುಲ್ಬರ್ಗ ನಗರವೊಂದರಲ್ಲೆ ಸುಮಾರು 90 ಸಾವಿರ ಎಲ್ಪಿಜಿ ಗ್ರಾಹಕರಿದ್ದಾರೆ. ಎಚ್ಪಿ ಹಾಗೂ ಭಾರತ್ ಗ್ಯಾಸ್ ಗ್ರಾಹಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ಯಾಸ್ಗಾಗಿ ಸ್ನೇಹಿತರ ಮನೆಗೆ, ಸಂಬಂಧಿಕರ ಮನೆಗೆ ಅಲೆದಾಡುವ ಪರಿಸ್ಥಿತಿ ಕೆಲವರಿಗೆ ಒದಗಿದೆ. <br /> <br /> ಎಲ್ಪಿಜಿ ಕಿಟ್ ಅಳವಡಿಸಿಕೊಂಡಿದ್ದ ಆಟೋ ಸವಾರರೂ ಗ್ಯಾಸ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿರುವ ಕೆಲವು ಗ್ರಾಹಕರು, ದುಬಾರಿ ಬೆಲೆ ಕೊಟ್ಟು ಎಲ್ಪಿಜಿ ಗ್ಯಾಸ್ ಪೂರೈಸುವ ಖಾಸಗಿ ಕಂಪೆನಿಗಳಿಂದ ಗ್ಯಾಸ್ ಪಡೆಯುತ್ತಿದ್ದಾರೆ. <br /> <br /> ಮಂಗಳೂರಿನಿಂದ ಧಾರವಾಡಕ್ಕೆ ಟ್ಯಾಂಕರ್ಗಳ ಮೂಲಕ ಎಚ್ಪಿ ಗ್ಯಾಸ್ ಪೂರೈಕೆಯಾಗುತ್ತಿತ್ತು. ಧಾರವಾಡದಲ್ಲಿ ಅದನ್ನು ಸಿಲಿಂಡರ್ಗೆ ತುಂಬಿಸಿ (ಬಾಟ್ಲಿಂಗ್) ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ರವಾನಿಸಲಾಗುತ್ತಿತ್ತು. ಭಾರತ ಗ್ಯಾಸ್ ಕೂಡಾ ಬಹುತೇಕ ರಸ್ತೆ ಸಂಚಾರದ ಟ್ಯಾಂಕರ್ಗಳಲ್ಲಿ ಗ್ಯಾಸ್ ಸಾಗಿಸುತ್ತಿರುವುದರಿಂದ ಈ ಕಂಪೆನಿಯ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ. <br /> <br /> ಇಂಡೇನ್ ಗ್ಯಾಸ್ ಮಾತ್ರ ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಪೂರೈಸುವ ಕೊಳವೆಮಾರ್ಗ ಹೊಂದಿದೆ. ಅಲ್ಲಿಂದ ಬಹುತೇಕ ಸ್ಥಳಗಳಿಗೆ ರೈಲುಗಳ ಮುಖಾಂತರವೇ ಗ್ಯಾಸ್ ರವಾನಿಸುತ್ತಿದೆ. ಗುಲ್ಬರ್ಗ ನಗರಕ್ಕೆ ಬೆಳಗಾವಿಯ ಸಂಕೇಶ್ವರ ಸಮೀಪದ ಬಾಟ್ಲಿಂಗ್ ಕೇಂದ್ರದಿಂದ ಸಿಲಿಂಡರ್ ಪೂರೈಕೆಯಾಗುತ್ತಿತ್ತು. <br /> <br /> ಆದರೆ, ಬೆಳಗಾವಿಯಿಂದ ಸಂಕೇಶ್ವರಕ್ಕೆ ಟ್ಯಾಂಕರ್ಗಳ ಮೂಲಕವೇ ಗ್ಯಾಸ್ ರವಾನಿಸಬೇಕಿತ್ತು. ಅಲ್ಲಿಯೂ ತೊಂದರೆಯಾಗಿರುವುದರಿಂದ, ಇದೀಗ ಇಂಡೇನ್ ಗ್ಯಾಸ್ ಕಂಪೆನಿಯು ಆಂಧ್ರಪ್ರದೇಶದಿಂದ ಗುಲ್ಬರ್ಗಕ್ಕೆ ಗ್ಯಾಸ್ ಸಿಲಿಂಡರ್ಗಳನ್ನು ರವಾನಿಸುತ್ತಿದೆ.<br /> <br /> `ಹದಿನೈದು ದಿನ ಹಿಂದೆಯೇ ಸಿಲಿಂಡರ್ ಬುಕ್ ಮಾಡಿದ್ದೆ. ಇಲ್ಲಿಯವರೆಗೂ ಸಿಲಿಂಡರ್ ಕೊಟ್ಟಿಲ್ಲ. ಮನೆಯಲ್ಲಿನ ಗ್ಯಾಸ್ ಇನ್ನೆರಡು ದಿನದಲ್ಲಿ ಮುಗಿಯುತ್ತದೆ, ಏನು ಮಾಡುವುದೆಂದು ಹೊಳೆಯುತ್ತಿಲ್ಲ. ಕಟ್ಟಿಗೆ ಒಲೆ ಹಚ್ಚಿ ಅಡುಗೆ ಮಾಡುವ ಸ್ಥಿತಿ ಬರಬಹುದು~ ಎಂದು ಅಳಲು ತೋಡಿಕೊಂಡರು ಎಚ್.ಪಿ. ಗ್ಯಾಸ್ ಗ್ರಾಹಕಿ, ಸಂತ್ರಾಸವಾಡಿ ನಿವಾಸಿ ಸುಧಾ ಗುತ್ತೇದಾರ.<br /> <br /> `ಸರ್ಕಾರ ಆದಷ್ಟು ಬೇಗನೆ ಈ ಸಮಸ್ಯೆ ಬಗೆ ಹರಿಸಬೇಕು. ಹಿಂದಿನ ತಿಂಗಳು ಮುಷ್ಕರ ಮಾಡಿದಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ಮತ್ತೆ ಮುಷ್ಕರದ ಸುದ್ದಿ ಕೇಳಿ ಮತ್ತಷ್ಟು ಆತಂಕ ಪಡುವಂತಾಗಿದೆ. ಸಿಟಿಗಳ ಮನೆಯಲ್ಲಿ ಸೌದಿ ಒಲೆ ಇರುವುದಿಲ್ಲ. ಹಳ್ಳಿಯಾದರೆ ನಡೆದು ಹೋಗುತ್ತದೆ~ ಎಂದು ಮಿನಿವಿಧಾನಸೌಧದಲ್ಲಿ ನೌಕರಿ ಮಾಡುವ ಸಿದ್ರಾಮ ಕಳವಳ ವ್ಯಕ್ತಪಡಿಸಿದರು.<br /> <br /> `ಪೆಟ್ರೋಲಿಯಂ ಇಂಧನದ ವಿಷಯ ಕೇಂದ್ರ ಸರ್ಕಾರಕ್ಕೆ ಸಂಬಂಧ ಪಟ್ಟಿರುವುದರಿಂದ ಅಲ್ಲಿಯೇ ಆ ಸಮಸ್ಯೆ ಬಗೆಹರಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ~ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಜಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಲ್ಬರ್ಗ: </strong>ಐದನೇ ದಿನವಾದ ಸೋಮವಾರವೂ ಎಲ್.ಪಿ.ಜಿ. (ಗ್ಯಾಸ್) ಸಾಗಿಸುವ ಟ್ಯಾಂಕರ್ಗಳ ಮುಷ್ಕರ ಮುಂದುವರಿದಿದ್ದು, ಇದೀಗ ಗುಲ್ಬರ್ಗ ನಗರದ ಎಲ್ಪಿಜಿ ಗ್ರಾಹಕರಿಗೂ ಮುಷ್ಕರದ ಬಿಸಿ ತಗುಲಿದೆ.<br /> <br /> ಮುಖ್ಯವಾಗಿ ಹಿಂದುಸ್ತಾನ ಪೆಟ್ರೋಲ್ (ಎಚ್ಪಿ) ಹಾಗೂ ಭಾರತ ಗ್ಯಾಸ್ ಗ್ರಾಹಕರು `ಗ್ಯಾಸ್ ಟ್ರಬಲ್~ ಎದುರಿಸುತ್ತಿದ್ದಾರೆ. ಸುಮಾರು 20 ದಿನಗಳ ಹಿಂದೆ ಬುಕಿಂಗ್ ಮಾಡಿದ್ದ ಗ್ರಾಹಕರಿಗೆ, ಮುಷ್ಕರ ಆರಂಭಗೊಂಡ ಮೂರನೇ ದಿನದವರೆಗೂ ಅನಿಲ ಸಿಲಿಂಡರ್ ಕೆಲವರಿಗೆ ತಲುಪಿದೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿದ ಗ್ರಾಹಕರ ಸಮಸ್ಯೆ ಹೇಳತೀರದಾಗಿದೆ.<br /> <br /> ಗುಲ್ಬರ್ಗ ನಗರವೊಂದರಲ್ಲೆ ಸುಮಾರು 90 ಸಾವಿರ ಎಲ್ಪಿಜಿ ಗ್ರಾಹಕರಿದ್ದಾರೆ. ಎಚ್ಪಿ ಹಾಗೂ ಭಾರತ್ ಗ್ಯಾಸ್ ಗ್ರಾಹಕರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ಯಾಸ್ಗಾಗಿ ಸ್ನೇಹಿತರ ಮನೆಗೆ, ಸಂಬಂಧಿಕರ ಮನೆಗೆ ಅಲೆದಾಡುವ ಪರಿಸ್ಥಿತಿ ಕೆಲವರಿಗೆ ಒದಗಿದೆ. <br /> <br /> ಎಲ್ಪಿಜಿ ಕಿಟ್ ಅಳವಡಿಸಿಕೊಂಡಿದ್ದ ಆಟೋ ಸವಾರರೂ ಗ್ಯಾಸ್ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದೇ ಸಿಲಿಂಡರ್ ಸಂಪರ್ಕ ಹೊಂದಿರುವ ಕೆಲವು ಗ್ರಾಹಕರು, ದುಬಾರಿ ಬೆಲೆ ಕೊಟ್ಟು ಎಲ್ಪಿಜಿ ಗ್ಯಾಸ್ ಪೂರೈಸುವ ಖಾಸಗಿ ಕಂಪೆನಿಗಳಿಂದ ಗ್ಯಾಸ್ ಪಡೆಯುತ್ತಿದ್ದಾರೆ. <br /> <br /> ಮಂಗಳೂರಿನಿಂದ ಧಾರವಾಡಕ್ಕೆ ಟ್ಯಾಂಕರ್ಗಳ ಮೂಲಕ ಎಚ್ಪಿ ಗ್ಯಾಸ್ ಪೂರೈಕೆಯಾಗುತ್ತಿತ್ತು. ಧಾರವಾಡದಲ್ಲಿ ಅದನ್ನು ಸಿಲಿಂಡರ್ಗೆ ತುಂಬಿಸಿ (ಬಾಟ್ಲಿಂಗ್) ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ರವಾನಿಸಲಾಗುತ್ತಿತ್ತು. ಭಾರತ ಗ್ಯಾಸ್ ಕೂಡಾ ಬಹುತೇಕ ರಸ್ತೆ ಸಂಚಾರದ ಟ್ಯಾಂಕರ್ಗಳಲ್ಲಿ ಗ್ಯಾಸ್ ಸಾಗಿಸುತ್ತಿರುವುದರಿಂದ ಈ ಕಂಪೆನಿಯ ಗ್ರಾಹಕರು ತೊಂದರೆ ಎದುರಿಸುತ್ತಿದ್ದಾರೆ. <br /> <br /> ಇಂಡೇನ್ ಗ್ಯಾಸ್ ಮಾತ್ರ ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಪೂರೈಸುವ ಕೊಳವೆಮಾರ್ಗ ಹೊಂದಿದೆ. ಅಲ್ಲಿಂದ ಬಹುತೇಕ ಸ್ಥಳಗಳಿಗೆ ರೈಲುಗಳ ಮುಖಾಂತರವೇ ಗ್ಯಾಸ್ ರವಾನಿಸುತ್ತಿದೆ. ಗುಲ್ಬರ್ಗ ನಗರಕ್ಕೆ ಬೆಳಗಾವಿಯ ಸಂಕೇಶ್ವರ ಸಮೀಪದ ಬಾಟ್ಲಿಂಗ್ ಕೇಂದ್ರದಿಂದ ಸಿಲಿಂಡರ್ ಪೂರೈಕೆಯಾಗುತ್ತಿತ್ತು. <br /> <br /> ಆದರೆ, ಬೆಳಗಾವಿಯಿಂದ ಸಂಕೇಶ್ವರಕ್ಕೆ ಟ್ಯಾಂಕರ್ಗಳ ಮೂಲಕವೇ ಗ್ಯಾಸ್ ರವಾನಿಸಬೇಕಿತ್ತು. ಅಲ್ಲಿಯೂ ತೊಂದರೆಯಾಗಿರುವುದರಿಂದ, ಇದೀಗ ಇಂಡೇನ್ ಗ್ಯಾಸ್ ಕಂಪೆನಿಯು ಆಂಧ್ರಪ್ರದೇಶದಿಂದ ಗುಲ್ಬರ್ಗಕ್ಕೆ ಗ್ಯಾಸ್ ಸಿಲಿಂಡರ್ಗಳನ್ನು ರವಾನಿಸುತ್ತಿದೆ.<br /> <br /> `ಹದಿನೈದು ದಿನ ಹಿಂದೆಯೇ ಸಿಲಿಂಡರ್ ಬುಕ್ ಮಾಡಿದ್ದೆ. ಇಲ್ಲಿಯವರೆಗೂ ಸಿಲಿಂಡರ್ ಕೊಟ್ಟಿಲ್ಲ. ಮನೆಯಲ್ಲಿನ ಗ್ಯಾಸ್ ಇನ್ನೆರಡು ದಿನದಲ್ಲಿ ಮುಗಿಯುತ್ತದೆ, ಏನು ಮಾಡುವುದೆಂದು ಹೊಳೆಯುತ್ತಿಲ್ಲ. ಕಟ್ಟಿಗೆ ಒಲೆ ಹಚ್ಚಿ ಅಡುಗೆ ಮಾಡುವ ಸ್ಥಿತಿ ಬರಬಹುದು~ ಎಂದು ಅಳಲು ತೋಡಿಕೊಂಡರು ಎಚ್.ಪಿ. ಗ್ಯಾಸ್ ಗ್ರಾಹಕಿ, ಸಂತ್ರಾಸವಾಡಿ ನಿವಾಸಿ ಸುಧಾ ಗುತ್ತೇದಾರ.<br /> <br /> `ಸರ್ಕಾರ ಆದಷ್ಟು ಬೇಗನೆ ಈ ಸಮಸ್ಯೆ ಬಗೆ ಹರಿಸಬೇಕು. ಹಿಂದಿನ ತಿಂಗಳು ಮುಷ್ಕರ ಮಾಡಿದಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದೀಗ ಮತ್ತೆ ಮುಷ್ಕರದ ಸುದ್ದಿ ಕೇಳಿ ಮತ್ತಷ್ಟು ಆತಂಕ ಪಡುವಂತಾಗಿದೆ. ಸಿಟಿಗಳ ಮನೆಯಲ್ಲಿ ಸೌದಿ ಒಲೆ ಇರುವುದಿಲ್ಲ. ಹಳ್ಳಿಯಾದರೆ ನಡೆದು ಹೋಗುತ್ತದೆ~ ಎಂದು ಮಿನಿವಿಧಾನಸೌಧದಲ್ಲಿ ನೌಕರಿ ಮಾಡುವ ಸಿದ್ರಾಮ ಕಳವಳ ವ್ಯಕ್ತಪಡಿಸಿದರು.<br /> <br /> `ಪೆಟ್ರೋಲಿಯಂ ಇಂಧನದ ವಿಷಯ ಕೇಂದ್ರ ಸರ್ಕಾರಕ್ಕೆ ಸಂಬಂಧ ಪಟ್ಟಿರುವುದರಿಂದ ಅಲ್ಲಿಯೇ ಆ ಸಮಸ್ಯೆ ಬಗೆಹರಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ~ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಜಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>