ಶಿವಮೊಗ್ಗ:ಇದೇ ಮಾರ್ಚ್ 30ರಂದು ರಂದು ಟಿವಿಯಲ್ಲಿ ಕೆಜಿಎಫ್ ಸಿನಿಮಾ ಪ್ರಸಾರವಾಗಲಿದ್ದು, ವಿದ್ಯುತ್ ಕಡಿತ ಮಾಡಬಾರದು ಎಂದು ಅಂಚೆ ಪತ್ರದಲ್ಲಿ ಯಶ್ ಅಭಿಮಾನಿಯೊಬ್ಬರು ಬೆಸ್ಕಾಂಗೆ ಬೆದರಿಕೆ ಹಾಕಿದ್ದಾರೆ.
ಭದ್ರಾವತಿಯ ಮೆಸ್ಕಾಂ ಕಚೇರಿಗೆ ಬೆದರಿಕೆಯ ಅಂಚೆ ಪತ್ರ ಬಂದಿದೆ. ಮೆಸ್ಕಾಂ ಎಇಇಗೆ ಬೆದರಿಕೆಯೊಡ್ಡಿ ಅನಾಮಧೇಯ ವ್ಯಕ್ತಿ ಪತ್ರ ಬರೆದಿದ್ದಾರೆ.
ಅಂದು ವಿದ್ಯುತ್ ಕಡಿತಗೊಳಿಸಿದರೆ ಮೆಸ್ಕಾಂ ಕಚೇರಿಗೆ ಬಾಂಬ್ ಇಡುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ರಾಜಕೀಯ ಕುಮ್ಮಕ್ಕಿನಿಂದ ಏನಾದರುಸಿನಿಮಾ ಪ್ರಸಾರದ ಸಮಯದಲ್ಲಿ ವಿದ್ಯುತ್ ಕಟ್ ಮಾಡಿದರೆ ಕಚೇರಿಗೆ ಬಾಂಬ್ ಇಡುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.