ಫೆ.17 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 5.30 ಕ್ಕೆ ಧ್ವಜಾರೋಹಣವನ್ನು ತೋಟಂಬೈಲು ಬಿ.ತಿಮ್ಮಯ್ಯ ಅವರು ನೆರವೇರಿಸಲಿದ್ದಾರೆ. 5.45 ಕ್ಕೆ ಉತ್ಸವವನ್ನು ಎಸ್.ಎನ್.ಡಿ.ಪಿ. ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಕೆ ಲೋಕೇಶ್ ಹಾಗೂ ನಿವೃತ್ತ ವಲಯ ಅರಣ್ಯಾಧಿಕಾರಿ ಎಂ.ಬಿ ಮೊಣ್ಣಪ್ಪ ಉದ್ಘಾಟಿಸುವರು. ಸಂಜೆ 6.30 ಕ್ಕೆ ಮುತ್ತಪ್ಪನ ಕಲಶವನ್ನು ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ತರುವುದು, ಸಂಜೆ 6 ಕ್ಕೆ ಮುತ್ತಪ್ಪನ ಮಲೆ ಇಳಿಸುವುದು, 6.30ಕ್ಕೆ ವೆಳ್ಳಾಟ್ಟಂ, ರಾತ್ರಿ 8ಕ್ಕೆ ಶಾಸ್ತ ವೆಳ್ಳಾಟ್ಟಂ, ರಾತ್ರಿ 9 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಕ್ಕೆ ಭಗವತಿ ವೆಳ್ಳಾಟ್ಟಂ, ರಾತ್ರಿ 11 ಕ್ಕೆ ಗುಳಿಗನ ವೆಳ್ಳಾಟ್ಟಂ ನಡೆಯಲಿದೆ.