<p><strong>ಸುಂಟಿಕೊಪ್ಪ:</strong> ಇಲ್ಲಿನ ಪೊಲೀಸ್ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಹಾಳು ಕೊಂಪೆಯಂತಾಗಿದ್ದು, ಪೊಲೀಸರು ಹಾಗೂ ಅವರ ಕುಟುಂಬಸ್ಥರು ಆತಂಕದಿಂದ ದಿನದೂಡುವ ಸ್ಥಿತಿಯಿದೆ.</p>.<p>ಜನ ಸಾಮಾನ್ಯರನ್ನು ನೆಮ್ಮದಿಯಿಂದ ನಿದ್ದೆ ಮಾಡುವಂತೆ ಮಾಡುವ ಪೊಲೀಸರಿಗೇ ನೆಮ್ಮದಿ ಇಲ್ಲವಾಗಿದೆ. ಅವರಿಗೆ ವಿಶ್ರಾಂತಿಗೆ ಸುಸಜ್ಜಿತ ವಸತಿಗೃಹವಿಲ್ಲದೇ ಕುಶಾಲನಗರ, ಮಡಿಕೇರಿಯಲ್ಲಿ ಬಾಡಿಗೆಗೆ ಮನೆ ಪಡೆದು ಓಡಾಡುತ್ತಿದ್ದಾರೆ.</p>.<p>ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಗ್ರಾಮ ಪಂಚಾಯಿತಿ ಮತ್ತು 20 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಶಾಲಾ–ಕಾಲೇಜು, ಬ್ಯಾಂಕ್, ಅರಣ್ಯ ಪ್ರದೇಶ ಹಾಗೂ ಜನರ ಸುರಕ್ಷತೆಯ ಹೊಣೆ ಇಲ್ಲಿಯ ಪೊಲೀಸ್ ಸಿಬ್ಬಂದಿಗೆ ಇದೆ.</p>.<p><strong>ಮೂಲ ಸೌಕರ್ಯ ಇಲ್ಲ:</strong> 50 ವರ್ಷಗಳ ಹಿಂದೆ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, ಈಗ ಅವು ಶಿಥಿಲಾವಸ್ಥೆಗೆ ತಲುಪಿವೆ. ಚಾವಣಿ ಕುಸಿಯುವ ಹಂತದಲ್ಲಿವೆ. ಕೊಡಗಿನಲ್ಲಿ ಮಳೆ ಅಧಿಕ, ಸಣ್ಣ ಮಳೆಗೂ ಮಳೆಯ ನೀರು ಒಳಗೆ ಬರುವುದು ಸಾಮಾನ್ಯವಾಗಿದೆ.</p>.<p>ಆದ್ದರಿಂದ, ಪ್ಲಾಸ್ಟಿಕ್ ಹೊದಿಕೆಯೇ ಆಶ್ರಯವಾಗಿದೆ. ಗೋಡೆಗಳು ಬಿರುಕುಬಿಟ್ಟು ಅಪಾಯ ಆಹ್ವಾನಿಸುತ್ತಿವೆ. ಪಿಎಸ್ಐ ಒಳಗೊಂಡಂತೆ ಐದು ಕುಟುಂಬಗಳು ಅದೇ ವಸತಿಗೃಹದಲ್ಲಿ ಬದುಕು ನಡೆಸುತ್ತಿದ್ದರೆ, 19 ಮಂದಿ ಇವುಗಳ ಸಹವಾಸವೇ ಸಾಕೆಂದು ಬಾಡಿಗೆ ಮನೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಸಿಬ್ಬಂದಿ.</p>.<p>ಉಲುಗುಲಿ ಗ್ರಾಮದ 1.65 ಎಕರೆ ಜಾಗದ ಆರ್ಟಿಸಿ ಅನ್ನು ಒದಗಿಸಿಕೊಡುವಂತೆ ಸೋಮವಾರ ಪೇಟೆ ತಾಲ್ಲೂಕು ತಹಶೀಲ್ದಾರ್ಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ ಎನ್ನುತ್ತಾರೆ ಪೊಲೀಸರು.</p>.<p>‘ಇಲ್ಲಿರುವ ವಸತಿ ಗೃಹಗಳು ಬಹಳಷ್ಟು ಹಳೆಯದಾಗಿವೆ: ‘ನವೀಕರಿಸಲು ಸಾಧ್ಯವಿಲ್ಲ. ಆರ್ಟಿಸಿ ಬದಲಾವಣೆಗೆ ಕೋರಿ ಉಪ ವಿಭಾಗದಿಕಾರಿ, ಜಿಲ್ಲಾಧಿಕಾರಿ, ತಹಶೀಲ್ದಾರ್ ವರದಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಆರ್ಟಿಸಿ ಬದಲಾವಣೆಯಾದರೆ, ₹1 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿಗೃಹಕ್ಕೆ ಮನವಿ ಮಾಡುತ್ತೇವೆ’ ಎಂದು ಪಿಎಸ್ಐ ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><em><strong>ಸುನಿಲ್ ಎಂ.ಎಸ್</strong></em></p>.<p><em><strong>* * </strong></em></p>.<p>ಆರ್ಟಿಸಿ ವರ್ಗಾಯಿಸಲು ಎಲ್ಲ ದಾಖಲಾತಿ ಸಲ್ಲಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಪೊಲೀಸರ ಜೀವನಕ್ಕೂ ಉತ್ತಮ ವಸತಿ ಗೃಹಗಳು ಬೇಕಲ್ಲವೇ? <br /> <strong>ನಾಗೇಶ್ ಪೂಜಾರಿ, </strong>ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ:</strong> ಇಲ್ಲಿನ ಪೊಲೀಸ್ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಹಾಳು ಕೊಂಪೆಯಂತಾಗಿದ್ದು, ಪೊಲೀಸರು ಹಾಗೂ ಅವರ ಕುಟುಂಬಸ್ಥರು ಆತಂಕದಿಂದ ದಿನದೂಡುವ ಸ್ಥಿತಿಯಿದೆ.</p>.<p>ಜನ ಸಾಮಾನ್ಯರನ್ನು ನೆಮ್ಮದಿಯಿಂದ ನಿದ್ದೆ ಮಾಡುವಂತೆ ಮಾಡುವ ಪೊಲೀಸರಿಗೇ ನೆಮ್ಮದಿ ಇಲ್ಲವಾಗಿದೆ. ಅವರಿಗೆ ವಿಶ್ರಾಂತಿಗೆ ಸುಸಜ್ಜಿತ ವಸತಿಗೃಹವಿಲ್ಲದೇ ಕುಶಾಲನಗರ, ಮಡಿಕೇರಿಯಲ್ಲಿ ಬಾಡಿಗೆಗೆ ಮನೆ ಪಡೆದು ಓಡಾಡುತ್ತಿದ್ದಾರೆ.</p>.<p>ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಗ್ರಾಮ ಪಂಚಾಯಿತಿ ಮತ್ತು 20 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಶಾಲಾ–ಕಾಲೇಜು, ಬ್ಯಾಂಕ್, ಅರಣ್ಯ ಪ್ರದೇಶ ಹಾಗೂ ಜನರ ಸುರಕ್ಷತೆಯ ಹೊಣೆ ಇಲ್ಲಿಯ ಪೊಲೀಸ್ ಸಿಬ್ಬಂದಿಗೆ ಇದೆ.</p>.<p><strong>ಮೂಲ ಸೌಕರ್ಯ ಇಲ್ಲ:</strong> 50 ವರ್ಷಗಳ ಹಿಂದೆ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, ಈಗ ಅವು ಶಿಥಿಲಾವಸ್ಥೆಗೆ ತಲುಪಿವೆ. ಚಾವಣಿ ಕುಸಿಯುವ ಹಂತದಲ್ಲಿವೆ. ಕೊಡಗಿನಲ್ಲಿ ಮಳೆ ಅಧಿಕ, ಸಣ್ಣ ಮಳೆಗೂ ಮಳೆಯ ನೀರು ಒಳಗೆ ಬರುವುದು ಸಾಮಾನ್ಯವಾಗಿದೆ.</p>.<p>ಆದ್ದರಿಂದ, ಪ್ಲಾಸ್ಟಿಕ್ ಹೊದಿಕೆಯೇ ಆಶ್ರಯವಾಗಿದೆ. ಗೋಡೆಗಳು ಬಿರುಕುಬಿಟ್ಟು ಅಪಾಯ ಆಹ್ವಾನಿಸುತ್ತಿವೆ. ಪಿಎಸ್ಐ ಒಳಗೊಂಡಂತೆ ಐದು ಕುಟುಂಬಗಳು ಅದೇ ವಸತಿಗೃಹದಲ್ಲಿ ಬದುಕು ನಡೆಸುತ್ತಿದ್ದರೆ, 19 ಮಂದಿ ಇವುಗಳ ಸಹವಾಸವೇ ಸಾಕೆಂದು ಬಾಡಿಗೆ ಮನೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಸಿಬ್ಬಂದಿ.</p>.<p>ಉಲುಗುಲಿ ಗ್ರಾಮದ 1.65 ಎಕರೆ ಜಾಗದ ಆರ್ಟಿಸಿ ಅನ್ನು ಒದಗಿಸಿಕೊಡುವಂತೆ ಸೋಮವಾರ ಪೇಟೆ ತಾಲ್ಲೂಕು ತಹಶೀಲ್ದಾರ್ಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ ಎನ್ನುತ್ತಾರೆ ಪೊಲೀಸರು.</p>.<p>‘ಇಲ್ಲಿರುವ ವಸತಿ ಗೃಹಗಳು ಬಹಳಷ್ಟು ಹಳೆಯದಾಗಿವೆ: ‘ನವೀಕರಿಸಲು ಸಾಧ್ಯವಿಲ್ಲ. ಆರ್ಟಿಸಿ ಬದಲಾವಣೆಗೆ ಕೋರಿ ಉಪ ವಿಭಾಗದಿಕಾರಿ, ಜಿಲ್ಲಾಧಿಕಾರಿ, ತಹಶೀಲ್ದಾರ್ ವರದಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಆರ್ಟಿಸಿ ಬದಲಾವಣೆಯಾದರೆ, ₹1 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿಗೃಹಕ್ಕೆ ಮನವಿ ಮಾಡುತ್ತೇವೆ’ ಎಂದು ಪಿಎಸ್ಐ ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><em><strong>ಸುನಿಲ್ ಎಂ.ಎಸ್</strong></em></p>.<p><em><strong>* * </strong></em></p>.<p>ಆರ್ಟಿಸಿ ವರ್ಗಾಯಿಸಲು ಎಲ್ಲ ದಾಖಲಾತಿ ಸಲ್ಲಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಪೊಲೀಸರ ಜೀವನಕ್ಕೂ ಉತ್ತಮ ವಸತಿ ಗೃಹಗಳು ಬೇಕಲ್ಲವೇ? <br /> <strong>ನಾಗೇಶ್ ಪೂಜಾರಿ, </strong>ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>