<p>ೆ</p>.<p>ಮಡಿಕೇರಿ: ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ‘ಹಾರ್ಟ್ ಲ್ಯಾಂಪ್’ (ಮೂಲ: ಬಾನು ಮುಷ್ತಾಕ್ ಅವರ ‘ಎದೆಯ ಹಣತೆ) ಕೃತಿಯು 2 ತಿಂಗಳಿನಲ್ಲಿ 70ಸಾವಿರ ಪ್ರತಿ ಮುದ್ರಣಗೊಂಡಿದೆ ಎಂದು ಅನುವಾದಕಿ ದೀಪಾ ಭಾಸ್ತಿ ತಿಳಿಸಿದರು.</p>.<p>ಕೊಡಗು ಪತ್ರಕರ್ತರ ಸಂಘವು ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅಮೆಜಾನ್ನಂತಹ ವೇದಿಕೆಯಲ್ಲಿ ಸತತ ಮೂರು ವಾರಗಳವರೆಗೆ ಎಲ್ಲ ವಿಭಾಗದಲ್ಲೂ ಈ ಕೃತಿ ಮಾರಾಟದಲ್ಲಿ ಮೊದಲ ಸ್ಥಾನ ಪಡೆದಿತ್ತು. ಎಲ್ಲೆಡೆಯಿಂದ ಈ ಕೃತಿಗೆ ಬೇಡಿಕೆ ಬರುತ್ತಿದೆ. ‘ಹಾರ್ಟ್ ಲ್ಯಾಂಪ್’ ಕೃತಿಯನ್ನು ಮಲಯಾಳಿ, ಅಸ್ಸಾಮಿ ಹಾಗೂ ಒಡಿಯಾ ಭಾಷೆಗಳಿಗೆ ಭಾಷಾಂತರಿಸಲು ಅನುಮತಿ ನೀಡಿರುವೆ. ಇನ್ನಷ್ಟು ಭಾಷೆಗಳಿಂದ ಭಾಷಾಂತರಕ್ಕಾಗಿ ಕೋರಿಕೆಗಳು ಬರುತ್ತಿವೆ’ ಎಂದು ಹೇಳಿದರು.</p>.<p>‘ಕನ್ನಡದಲ್ಲಿ ಭಾಷಾಂತರ ಕ್ಷೇತ್ರ ಇನ್ನಷ್ಟು ಬೆಳೆಯಬೇಕಿದೆ. ಕನ್ನಡದ ಕೃತಿಗಳು ಇತರ ಭಾಷೆಗಳಿಗೆ, ಇತರ ಭಾಷೆಗಳ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು. ಆದರೆ, ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಭಾಷಾಂತರದ ಪ್ರಮಾಣ ಕಡಿಮೆ ಇದೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ೆ</p>.<p>ಮಡಿಕೇರಿ: ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ‘ಹಾರ್ಟ್ ಲ್ಯಾಂಪ್’ (ಮೂಲ: ಬಾನು ಮುಷ್ತಾಕ್ ಅವರ ‘ಎದೆಯ ಹಣತೆ) ಕೃತಿಯು 2 ತಿಂಗಳಿನಲ್ಲಿ 70ಸಾವಿರ ಪ್ರತಿ ಮುದ್ರಣಗೊಂಡಿದೆ ಎಂದು ಅನುವಾದಕಿ ದೀಪಾ ಭಾಸ್ತಿ ತಿಳಿಸಿದರು.</p>.<p>ಕೊಡಗು ಪತ್ರಕರ್ತರ ಸಂಘವು ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅಮೆಜಾನ್ನಂತಹ ವೇದಿಕೆಯಲ್ಲಿ ಸತತ ಮೂರು ವಾರಗಳವರೆಗೆ ಎಲ್ಲ ವಿಭಾಗದಲ್ಲೂ ಈ ಕೃತಿ ಮಾರಾಟದಲ್ಲಿ ಮೊದಲ ಸ್ಥಾನ ಪಡೆದಿತ್ತು. ಎಲ್ಲೆಡೆಯಿಂದ ಈ ಕೃತಿಗೆ ಬೇಡಿಕೆ ಬರುತ್ತಿದೆ. ‘ಹಾರ್ಟ್ ಲ್ಯಾಂಪ್’ ಕೃತಿಯನ್ನು ಮಲಯಾಳಿ, ಅಸ್ಸಾಮಿ ಹಾಗೂ ಒಡಿಯಾ ಭಾಷೆಗಳಿಗೆ ಭಾಷಾಂತರಿಸಲು ಅನುಮತಿ ನೀಡಿರುವೆ. ಇನ್ನಷ್ಟು ಭಾಷೆಗಳಿಂದ ಭಾಷಾಂತರಕ್ಕಾಗಿ ಕೋರಿಕೆಗಳು ಬರುತ್ತಿವೆ’ ಎಂದು ಹೇಳಿದರು.</p>.<p>‘ಕನ್ನಡದಲ್ಲಿ ಭಾಷಾಂತರ ಕ್ಷೇತ್ರ ಇನ್ನಷ್ಟು ಬೆಳೆಯಬೇಕಿದೆ. ಕನ್ನಡದ ಕೃತಿಗಳು ಇತರ ಭಾಷೆಗಳಿಗೆ, ಇತರ ಭಾಷೆಗಳ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು. ಆದರೆ, ಭಾರತದ ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಭಾಷಾಂತರದ ಪ್ರಮಾಣ ಕಡಿಮೆ ಇದೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>