ಸಂವಾದ ಕಾರ್ಯಕ್ರಮದಲ್ಲಿ ರೈತಪರ ಹೋರಾಟಗಾರರು ವಿವಿಧ ಪಕ್ಷಗಳ ಮುಖಂಡರು ಪತ್ರಕರ್ತರು ಭಾಗಿಯಾಗಿದ್ದರು
ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಭಾಗವಹಿಸಿದ್ದರು
ಬಫರ್ ವಲಯವನ್ನು ಶೂನ್ಯಕ್ಕೆ ಇಳಿಸಿ ‘ಸಿ’ ಮತ್ತು ‘ಡಿ’ ಭೂಮಿಯನ್ನು ರೈತರಿಗೆ ಖಾತೆ ಮಾಡಿಕೊಡಿ. ಬಫರ್ ವಲಯವನ್ನು ಶೂನ್ಯಕ್ಕೆ ಇಳಿಸಿ. ಪರಂಪರೆಯಿಂದ ಬಳಕೆ ಮಾಡುತ್ತಿರುವ ವನ್ಯಜೀವಿ ಉತ್ಪನ್ನವನ್ನು ಬಳಸಲು ಅವಕಾಶ ಮಾಡಿಕೊಡಿ.
ರವಿ ಕಾಳಪ್ಪ ಬಿಜೆಪಿ ಜಿಲ್ಲಾಧ್ಯಕ್ಷ.
ಸಾಗುವಳಿ ಮಾಡುತ್ತಿರುವವರಿಗೆ ಅನುಕೂಲ ಮಾಡಿಕೊಡಿ ಸಿ ಮತ್ತು ಡಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಅನುಕೂಲ ಮಾಡಿಕೊಡಿ. ಬಫರ್ ವಲಯನ್ನು ಶೂನ್ಯಕ್ಕೆ ಇಳಿಸಿ. ಕಸ್ತೂರಿ ರಂಗನ್ ವರದಿಯನ್ನು ಎಲ್ಲ ಜಿಲ್ಲೆಯವರೂ ವಿರೋಧಿಸಲಿ.
ಧರ್ಮಜ ಉತ್ತಪ್ಪ ಕಾಂಗ್ರೆಸ್ ಜಿಲ್ಲಾಧ್ಯಕ್ಷ.
ಅನಧಿಕೃತ ಒತ್ತುವರಿ ತೆರವು ಮಾಡಿ ಕೊಡಗಿನಲ್ಲಿ 1900ರಲ್ಲಿ 16 ಸಾವಿರ ಎಕರೆ ಇದ್ದ ದೇವರಕಾಡು ಈಗ 11 ಸಾವಿರ ಎಕರೆಗೆ ಇಳಿಕೆಯಾಗಿದೆ. ಅನಧಿಕೃತವಾಗಿ ಆಗಿರುವ ಒತ್ತುವರಿಯನ್ನು ತೆರವು ಮಾಡಿ ಇರುವ ಅರಣ್ಯವನ್ನು ಉಳಿಸಿಕೊಳ್ಳಬೇಕು
ತಮ್ಮುಪೂವಯ್ಯ ಪರಿಸರವಾದಿ.
ಹೊರ ಜಿಲ್ಲೆಯಲ್ಲಿ ಭೂಮಿ ನೀಡಬಾರದೇಕೆ? ಹಾರಂಗಿ ಜಲಾಶಯದಿಂದ ಬಹುಪಾಲು ನೀರು ಹೊರ ಜಿಲ್ಲೆಗಳಿಗೆ ಹರಿದು ಹೋಗುತ್ತದೆ. ಆದರೆ ಈ ಜಲಾಶಯ ನಿರ್ಮಿಸಲು ಭೂಮಿ ಕಳೆದುಕೊಂಡ ರೈತರಿಗೆ ಹೊರ ಜಿಲ್ಲೆಯಲ್ಲಿ ಭೂಮಿ ನೀಡಬಾರದೇಕೇ?
ಕೆ.ಪಿ.ಸುರೇಶ್ ರೈತ ಹೋರಾಟ ಸಮಿತಿಯ ಅಧ್ಯಕ್ಷ.
ಸಣ್ಣ ಸಣ್ಣ ರೈತರನ್ನು ಉಳಿಸಿ ಈ ಸಭೆಗೆ ಸಂಸದರನ್ನೂ ಕರೆಯಬೇಕಿತ್ತು. ದೊಡ್ಡ ದೊಡ್ಡ ಕಂಪನಿಗಳ ಒತ್ತುವರಿಗಳನ್ನು ತೆರವು ಮಾಡಿ. ಸಣ್ಣ ಸಣ್ಣ ರೈತರನ್ನು ಉಳಿಸಬೇಕು. ಅವರನ್ನು ಒಕ್ಕಲೆಬ್ಬಿಸಬಾರದು
ಮನು ಸೋಮಯ್ಯ ರೈತಪರ ಹೋರಾಟಗಾರ.
ಸೂಕ್ಷ್ಮ ವಲಯ ರಚನೆ ಬೇಡ ಕಸ್ತೂರಿರಂಗನ್ ವರದಿ ಪ್ರಕಾರ ಸೂಕ್ಷ್ಮ ವಲಯಗಳು ರಚನೆಯಾದರೆ ಕೊಡಗಿನಲ್ಲಿ ಯಾರೂ ವಾಸ ಮಾಡಲು ಸಾಧ್ಯವಾಗುವುದಿಲ್ಲ