<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಅರಣ್ಯ ಇಲಾಖೆಯ ಡಿಪೊಗೆ ಅಳವಡಿಸಿದ್ದ ಗೇಟಿನ ಕಂಬಿಗಳ ಮಧ್ಯೆ ತಲೆ ಸಿಲುಕಿಕೊಂಡು ಪರದಾಡುತ್ತಿದ್ದ ಕಾಡಾನೆಯೊಂದರ ನೆರವಿಗೆ ಮತ್ತೊಂದು ಆನೆ ಬಂದು ಅದನ್ನು ಬಿಡಿಸಿದೆ.</p><p>ಬೇಲಿ ದಾಟಿ 7 ಕಾಡಾನೆಗಳು ಡಿಪೊಗೆ ನುಗ್ಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಎಲ್ಲ ಕಾಡಾನೆಗಳು ಗೇಟನ್ನು ಸುರಕ್ಷಿತವಾಗಿ ದಾಟಿದವು. ಆದರೆ, ಕಾಡಾನೆಯೊಂದು ಆಕಸ್ಮಿಕವಾಗಿ ಗೇಟಿನ ಎರಡು ಕಂಬಿಗಳ ನಡುವೆ ತನ್ನ ತಲೆಯನ್ನು ತೂರಿಸಲು ಯತ್ನಿಸಿತು. ಈ ವೇಳೆ ಕಾಡಾನೆಯ ತಲೆ ಎರಡು ಕಂಬಿಗಳ ನಡುವೆ ಸಿಕ್ಕಿ ಹಾಕಿಕೊಂಡು ಘೀಳಿಡಲು ಆರಂಭಿಸಿತು. ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲ ತಲೆಯನ್ನು ಹೊರಕ್ಕೆ ಎಳೆಯಲು ಆನೆ ಇನ್ನಿಲ್ಲದ ಕಸರತ್ತು ನಡೆಸಿತು.</p>. <p>ಇದನ್ನು ದೂರದಿಂದಲೇ ನೋಡುತ್ತಿದ್ದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಲು ಯೋಜಿಸುತ್ತಿರುವಷ್ಟರಲ್ಲಿ ಮತ್ತೊಂದು ಕಾಡಾನೆ ನೆರವಿಗೆ ಬಂದು, ತನ್ನ ಸೊಂಡಿಲಿನಿಂದ ಕಾಡಾನೆ ತಲೆ ಹೊರಕ್ಕೆ ಬರುವಂತೆ ಮಾಡಿತು. ನಂತರ, ಎರಡೂ ಆನೆಗಳು ಕಾಡಿನತ್ತ ಹೆಜ್ಜೆ ಹಾಕಿದವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಅರಣ್ಯ ಇಲಾಖೆಯ ಡಿಪೊಗೆ ಅಳವಡಿಸಿದ್ದ ಗೇಟಿನ ಕಂಬಿಗಳ ಮಧ್ಯೆ ತಲೆ ಸಿಲುಕಿಕೊಂಡು ಪರದಾಡುತ್ತಿದ್ದ ಕಾಡಾನೆಯೊಂದರ ನೆರವಿಗೆ ಮತ್ತೊಂದು ಆನೆ ಬಂದು ಅದನ್ನು ಬಿಡಿಸಿದೆ.</p><p>ಬೇಲಿ ದಾಟಿ 7 ಕಾಡಾನೆಗಳು ಡಿಪೊಗೆ ನುಗ್ಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಎಲ್ಲ ಕಾಡಾನೆಗಳು ಗೇಟನ್ನು ಸುರಕ್ಷಿತವಾಗಿ ದಾಟಿದವು. ಆದರೆ, ಕಾಡಾನೆಯೊಂದು ಆಕಸ್ಮಿಕವಾಗಿ ಗೇಟಿನ ಎರಡು ಕಂಬಿಗಳ ನಡುವೆ ತನ್ನ ತಲೆಯನ್ನು ತೂರಿಸಲು ಯತ್ನಿಸಿತು. ಈ ವೇಳೆ ಕಾಡಾನೆಯ ತಲೆ ಎರಡು ಕಂಬಿಗಳ ನಡುವೆ ಸಿಕ್ಕಿ ಹಾಕಿಕೊಂಡು ಘೀಳಿಡಲು ಆರಂಭಿಸಿತು. ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಕಾಲ ತಲೆಯನ್ನು ಹೊರಕ್ಕೆ ಎಳೆಯಲು ಆನೆ ಇನ್ನಿಲ್ಲದ ಕಸರತ್ತು ನಡೆಸಿತು.</p>. <p>ಇದನ್ನು ದೂರದಿಂದಲೇ ನೋಡುತ್ತಿದ್ದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಲು ಯೋಜಿಸುತ್ತಿರುವಷ್ಟರಲ್ಲಿ ಮತ್ತೊಂದು ಕಾಡಾನೆ ನೆರವಿಗೆ ಬಂದು, ತನ್ನ ಸೊಂಡಿಲಿನಿಂದ ಕಾಡಾನೆ ತಲೆ ಹೊರಕ್ಕೆ ಬರುವಂತೆ ಮಾಡಿತು. ನಂತರ, ಎರಡೂ ಆನೆಗಳು ಕಾಡಿನತ್ತ ಹೆಜ್ಜೆ ಹಾಕಿದವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>