ಬುಧವಾರ ಮಧ್ಯಾಹ್ನ ಪೂವಣ್ಣ ಅವರ ಗದ್ದೆಯ ಹುಲ್ಲಿನ ರಾಶಿಗೆ ಬೆಂಕಿ ತಗುಲಿದ್ದು, ಉದ್ದಕ್ಕೂ ವ್ಯಾಪಿಸಿದೆ. ಬೆಂಕಿ ತೋಟಕ್ಕೂ ಹಬ್ಬಿದ್ದು ಸುಮಾರು 50 ಗಿಡಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಕ್ಕೆ ಬಂದರೂ ಸ್ಥಳಕ್ಕೆ ತೆರಳಲಾಗದೇ ಹಿಂತಿರುಗಿದರು. ಗ್ರಾಮಸ್ಥರು ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.