ಬಳಿಕ ಒಂದಷ್ಟು ನಿಂತುಕೊಂಡೇ ಆಟವಾಡಿ ಮನೆಗೆ ತೆರಳುತ್ತಾರೆ. ಶೀತ ಹಿಡಿದ ಮಣ್ಣಿನ ನೆಲದಲ್ಲಿ ಕೂರುವ ಮಕ್ಕಳು ಹಾಗೂ ಶಿಕ್ಷಕಿಗೂ ಶೀತದ ಬಾಧೆ ಕಾಡುತ್ತಿದೆ. ಹಿಂದೆ ಅಂಗನವಾಡಿಗೆ ಪ್ರತ್ಯೇಕ ಕಾಂಕ್ರೀಟ್ ಕಟ್ಟಡ ನಿರ್ಮಿಸಿಕೊಡಲಾಗಿತ್ತು. ಈ ಸ್ಥಳವನ್ನು ಈಗ ಪೊನ್ನಂಪೇಟೆ, ಅರುವತ್ತೊಕ್ಕಲು ಹಾಗೂ ಗೋಣಿಕೊಪ್ಪಲಿನ ತ್ಯಾಜ್ಯ ಸುರಿಯುವ ಕೇಂದ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಇದರಿಂದ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಲಾಯಿತು. ಇದರಿಂದ ದೇವಕಾಲೊನಿಯ ಪರಿಶಿಷ್ಟ ಪಂಗಡದ ಬಡಮಕ್ಕಳು ಅಂಗನವಾಡಿ ಕೇಂದ್ರದಿಂದ ವಂಚಿತರಾಗಿ ಶೀತ ಹಿಡಿದ ನೆಲದಲ್ಲಿಯೇ ಆಟಪಾಠ ಕಲಿಯುವಂತಾಗಿದೆ.