ಕುಟ್ಟ ಸಮೀಪದ ತೈಲ ಗ್ರಾಮದ ತೀತೀರ ವಾಸು ಎಂಬುವವರ ತೋಟದಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿ ಹಳ್ಳದಿಂದ ತನ್ನೊಂದಿಗೆ ಕರೆದೊಯ್ಯಲು ಸಾಧ್ಯವಾಗದೆ ತೋಟದಲ್ಲಿಯೇ ಬಿಟ್ಟು ಹಿಂಡಿನೊಂದಿಗೆ ಕಾಡಿನಲ್ಲಿ ಸೇರಿಕೊಂಡಿತ್ತು.
ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಬಂದ ಶ್ರೀಮಂಗಲ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ಹಳ್ಳದಿಂದ ರಕ್ಷಿಸಿ, ಕಾಡಿನಲ್ಲಿ ಸೇರಿಕೊಂಡಿದ್ದ ತಾಯಿ ಆನೆಯನ್ನು ಗುರುತಿಸಿ ಮರಿಯನ್ನು ಒಂದುಗೂಡಿಸಿರುವ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.