15ನೇ ಹಣಕಾಸಿನಲ್ಲಿ ಸಂಬಳಕ್ಕಾಗಿ ಮೀಸಲಿಟ್ಟ ಮೊತ್ತವನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಲ್ಲ. ಶಾಸನಬದ್ಧ ಅನುದಾನವನ್ನು ಸಂಬಳಕ್ಕಾಗಿ ಪ್ರತ್ಯೇಕಿಸಿ, ಇಲಾಖೆಯಿಂದ ಕಡಿತಗೊಳಿಸಿ ಸಿಬ್ಬಂದಿಯ ಖಾತೆಗೆ ಜಮೆ ಮಾಡಬೇಕು. ಕಂಪ್ಯೂಟರ್ ಆಪರೇಟರ್ಗಳಿಗೆ ಸೇವಾ ಅವಧಿ ಪರಿಗಣಿಸಿ, ವೃಂದ ಮತ್ತು ನೇಮಕಾತಿ ತಿದ್ದುಪಡಿ ತಂದು ನೇರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು. ಅನುಮೋದನೆ ಆಗದವರಿಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.