ಸೋಮವಾರಪೇಟೆ: ಸಮೀಪದ ತಾಕೇರಿ ಗ್ರಾಮದ ನಾಡ್ನಳ್ಳಿ ಮನೆ ಜೋಯಪ್ಪ ಅವರ ಪತ್ನಿ, ಎನ್.ಜೆ. ಮನು ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮಂಗಳವಾರ ಕಾಡೆಮ್ಮೆ ದಾಳಿ ನಡೆಸಿದ ಪರಿಣಾಮ ಹೊಟ್ಟೆಯ ಭಾಗದಲ್ಲಿ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಾಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಡವರಾಗಿರುವ ಮನು ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.