ಕೃಷಿ ಕಾರ್ಮಿಕ ಪರಮೇಶ್ವರ ಮುಗಳಖೋಡ ಅವರ ಪುತ್ರ ಮಲ್ಲಿಕಾರ್ಜುನ (13) ಮೃತಪಟ್ಟ ಬಾಲಕ. ಸೋಮವಾರ ಶಾಲೆಗೆ ಹೊರಟಿದ್ದ ಸಂದರ್ಭದಲ್ಲಿ ರಸ್ತೆ ಪಕ್ಕದ ಏರ್ಟೆಲ್ ಟವರ್ಗೆ ಅಳವಡಿಸಿದ್ದ ತಂತಿಯ ಜಾಳಿಗೆ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಜಾಳಿಗೆಯಲ್ಲಿ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.