ಮಡಿಕೇರಿ: ಮಡಿಕೇರಿ–ವಿರಾಜಪೇಟೆ ರಸ್ತೆಯ ಭೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಭೇತ್ರಿ ಸೇತುವೆ ಮೇಲಿನ ಸಂಚಾರ ಬಂದ್ ಮಾಡಲಾಗಿದೆ.
ಮೂರ್ನಾಡು – ಕೊಂಡಂಗೇರಿ- ಹಾಲುಗುಂದ-ವಿರಾಜಪೇಟೆ, ಮಡಿಕೇರಿ – ಮರಗೋಡು-ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ ಹಾಗೂ ಕುಶಾಲನಗರ-ಗುಡ್ಡೆಹೊಸೂರು-ನೆಲ್ಲಿಹುದಿಕೇರಿ- ಸಿದ್ದಾಪುರ- ಅಮ್ಮತ್ತಿ ಮೂಲಕ ವಿರಾಜಪೇಟೆಗೆ ತಲುಪಬಹುದು.
150 ಜನರ ಸ್ಥಳಾಂತರ:ನೆಲ್ಯಹುದಿಕೇರಿ ಹಾಗೂ ಬೆಟ್ಟದಕಾಡು ಗ್ರಾಮದ 150 ಜನರನ್ನು ಸ್ಥಳಾಂತರ ಮಾಡಲಾಗಿದೆ.