ಮಡಿಕೇರಿ: ‘ಅ. 17ರಂದು ನಡೆಯಲಿರುವ ಕೊಡಗಿನ ಕುಲದೇವತೆ, ತೀರ್ಥರೂಪಿಣಿ ಕಾವೇರಿ ಮಾತೆಯ ತೀರ್ಥೋದ್ಭವ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ ಅವರ ನೇತೃತ್ವದಲ್ಲಿ ತುರ್ತಾಗಿ ಕರೆದು, ಭಕ್ತರ ನಂಬಿಕೆ, ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು‘ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.