ಅತುಲ್ನ ತಂದೆ ಪ್ರಮೋದನ್ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ರ್ಯಾಂಕ್ ಪಡೆಯಲಾಗುವುದಿಲ್ಲ ಎನ್ನುವ ಭ್ರಮೆಯನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೊದಲು ತೊರೆಯಬೇಕು. ಸ್ನೇಹಿತರಾಗಿರುವ ವಿರಾಜಪೇಟೆಯ ಚಾಣಕ್ಯ ಕೋಚಿಂಗ್ ಸೆಂಟರ್ನವರು ಹಾಗೂ ಕಾವೇರಿ ಕಾಲೇಜಿನ ಉಪನ್ಯಾಸಕರ ಪರಿಶ್ರಮ ಉತ್ತಮ ರ್ಯಾಂಕ್ ಪಡೆಯಲು ಸಹಕಾರಿಯಾಗಿದೆ. ಮಂಗಳೂರು, ಮೈಸೂರು ಎನ್ನದೇ ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಓದಿದರೆ ಕಂಡಿತ ಉತ್ತಮ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಗ ಗಳಿಸಿದ ರ್ಯಾಂಕಿಂಗ್ ಉದಾಹರಣೆಯಾಗಿದೆ’ ಎಂದರು.