ಪಿರಿಯಾಪಟ್ಟಣದಿಂದ ದಕ್ಷಿಣ ಕೊಡಗಿಗೆ ಬರುವ ಸೊಪ್ಪು ಮತ್ತು ತರಕಾರಿ ವಾಹನಗಳು ಅಬ್ಬಳತಿ ಮಾರ್ಗವಾಗಿ ಅಳ್ಳೂರು ತಲುಪಿ ಅಲ್ಲಿಂದ ಆನೆಚೌಕೂರು ಗೇಟ್ಗೆ ಬರಬೇಕಾಗಿದೆ. ವಾರದಲ್ಲಿ ಮೂರು ದಿನ ಮಾತ್ರ ವ್ಯಾಪಾರ ವಹಿವಾಟು ನಡೆಯುವ ಗೋಣಿಕೊಪ್ಪಲು, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ ಶ್ರೀಮಂಗಲ ಭಾಗಕ್ಕೆ ಸೊಪ್ಪಿನ ವ್ಯಾಪಾರಿಗಳು ಕಷ್ಟಪಟ್ಟು ಬರಬೇಕಾಗಿದೆ. ಮಣ್ಣಿನ ರಾಶಿ ಹಾಕಿರುವುದರಿಂದ ಪಿರಿಯಾಪಟ್ಟಣ ಮತ್ತು ಗೋಣಿಕೊಪ್ಪಲು ನಡುವಿನ ತುರ್ತು ಸಂದರ್ಭದ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ.