‘ಮೆಗಾ ಸಿಟಿ ರಿಯಲ್ ಎಸ್ಟೇಟ್ ಯೋಜನೆ ಅಡಿ ಸಾರ್ವಜನಿಕರಿಂದ ಹಣ ಪಡೆದು ನಿವೇಶನ ವಿತರಿಸಿದೆ ವಂಚಿಸಿರುವ ಆರೋಪ ಯೋಗೇಶ್ವರ್ ಮೇಲಿದೆ. ಅವರು ಬಹುಕೋಟಿ ಹಗರಣದ ರೂವಾರಿ. ಕೇಂದ್ರ ಸರ್ಕಾರವೇ ಸ್ಥಾಪಿಸಿರುವ ತನಿಖಾ ಸಂಸ್ಥೆ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಯೋಗೇಶ್ವರ್ ಈಗಲೂ ವಿಚಾರಣೆಗೆ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ. ಇಂತಹ ವ್ಯಕ್ತಿಯ ನಾಮ ನಿರ್ದೇಶನ ಸಂವಿಧಾನಕ್ಕೆ ಎಸಗಿರುವ ಘೋರ ಅಪಚಾರ’ ಎಂದು ಹೇಳಿದರು.