<p><strong>ಸೋಮವಾರಪೇಟೆ</strong>: ಆಯುಧ ಪೂಜೆ ಆಚರಿಸಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಡಗರದ ಅಂತಿಮ ಸಿದ್ಧತೆ ನಡೆಯಿತು.</p>.<p>ಈ ಬಾರಿ ಹೂವಿನ ಬೆಲೆ ಹೆಚ್ಚಳದಿಂದಾಗಿ ವ್ಯಾಪರಸ್ಥರು ಕಳೆದ ಎರಡು ದಿನಗಳಿಂದ ಸರಿಯಾದ ವ್ಯಾಪಾರ ಇಲ್ಲದೆ ಖರೀದಿದಾರರನ್ನು ಕಾಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು.</p>.<p> ಗಣೇಶನ ಹಬ್ಬದಂದು ಒಂದು ಮಾರು ಸೇವಂತಿಗೆ ಹೂವಿಗೆ ₹10 ಇದ್ದ ಬೆಲೆ, ಈ ಹಬ್ಬಕ್ಕೆ ₹100ಕ್ಕೆ ಮಾರಾಟ ಮಾಡುತ್ತಿರುವುದರಿಂದ ಜನರು ಹೆಚ್ಚಾಗಿ ಹೂ ಖರೀದಿಗೆ ಮುಂದಾಗಲಿಲ್ಲ. ಬೂದುಕುಂಬಳ ಚಿಕ್ಕ ಗಾತ್ರದ ಒಂದಕ್ಕೆ ₹50 ರಿಂದ ₹100ಕ್ಕೆ ಮಾರಾಟವಾಗುತ್ತಿತ್ತು. ಉಳಿದಂತೆ ಮಾವಿನ ಸೊಪ್ಪು, ಬಾಳೆಕಂಬ, ಕಬ್ಬಿನ ಜಲ್ಲೆ, ಮಕ್ಕಳ ಆಟದ ಸಾಮಗ್ರಿಗಳು ಪಟ್ಟಣದೆಲ್ಲೆಡೆ ಮಾರಾಟಕ್ಕೆ ಇಟ್ಟಿರುವ ದೃಶ್ಯ ಕಂಡುಬಂತು.</p>.<p> ಕೊಣನೂರಿನ ಹೂವಿನ ವ್ಯಾಪಾರಿ ಪಾರ್ವತಿ ಮಾತನಾಡಿ, ‘ಈ ಬಾರಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಹೆಚ್ಚಳ ಮತ್ತು ಹೆಚ್ಚು ಹೂವಿನ ವ್ಯಾಪಾರಿಗಳು ಬಂದಿರುವುದರಿಂದ ವ್ಯಾಪಾರ ಸಾಧಾರಣವಾಗಿ ನಡೆಯುತ್ತಿದೆ. ಎರಡು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ’ ಎಂದು ತಿಳಿಸಿದರು.</p>.<p>ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಬೂದುಕುಂಬಳ ಕಾಯಿಗಳನ್ನು ವಾಹನಗಳಲ್ಲಿ ತುಂಬಿಕೊಂಡು ಬಂದು ರಸ್ತೆ ರಸ್ತೆಗಳಲ್ಲಿ ಮಾರುತ್ತಿರುವುದು ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ</strong>: ಆಯುಧ ಪೂಜೆ ಆಚರಿಸಲು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಡಗರದ ಅಂತಿಮ ಸಿದ್ಧತೆ ನಡೆಯಿತು.</p>.<p>ಈ ಬಾರಿ ಹೂವಿನ ಬೆಲೆ ಹೆಚ್ಚಳದಿಂದಾಗಿ ವ್ಯಾಪರಸ್ಥರು ಕಳೆದ ಎರಡು ದಿನಗಳಿಂದ ಸರಿಯಾದ ವ್ಯಾಪಾರ ಇಲ್ಲದೆ ಖರೀದಿದಾರರನ್ನು ಕಾಯುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು.</p>.<p> ಗಣೇಶನ ಹಬ್ಬದಂದು ಒಂದು ಮಾರು ಸೇವಂತಿಗೆ ಹೂವಿಗೆ ₹10 ಇದ್ದ ಬೆಲೆ, ಈ ಹಬ್ಬಕ್ಕೆ ₹100ಕ್ಕೆ ಮಾರಾಟ ಮಾಡುತ್ತಿರುವುದರಿಂದ ಜನರು ಹೆಚ್ಚಾಗಿ ಹೂ ಖರೀದಿಗೆ ಮುಂದಾಗಲಿಲ್ಲ. ಬೂದುಕುಂಬಳ ಚಿಕ್ಕ ಗಾತ್ರದ ಒಂದಕ್ಕೆ ₹50 ರಿಂದ ₹100ಕ್ಕೆ ಮಾರಾಟವಾಗುತ್ತಿತ್ತು. ಉಳಿದಂತೆ ಮಾವಿನ ಸೊಪ್ಪು, ಬಾಳೆಕಂಬ, ಕಬ್ಬಿನ ಜಲ್ಲೆ, ಮಕ್ಕಳ ಆಟದ ಸಾಮಗ್ರಿಗಳು ಪಟ್ಟಣದೆಲ್ಲೆಡೆ ಮಾರಾಟಕ್ಕೆ ಇಟ್ಟಿರುವ ದೃಶ್ಯ ಕಂಡುಬಂತು.</p>.<p> ಕೊಣನೂರಿನ ಹೂವಿನ ವ್ಯಾಪಾರಿ ಪಾರ್ವತಿ ಮಾತನಾಡಿ, ‘ಈ ಬಾರಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಹೆಚ್ಚಳ ಮತ್ತು ಹೆಚ್ಚು ಹೂವಿನ ವ್ಯಾಪಾರಿಗಳು ಬಂದಿರುವುದರಿಂದ ವ್ಯಾಪಾರ ಸಾಧಾರಣವಾಗಿ ನಡೆಯುತ್ತಿದೆ. ಎರಡು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇವೆ. ಯಾವುದೇ ಪ್ರಯೋಜನವಿಲ್ಲ’ ಎಂದು ತಿಳಿಸಿದರು.</p>.<p>ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಬೂದುಕುಂಬಳ ಕಾಯಿಗಳನ್ನು ವಾಹನಗಳಲ್ಲಿ ತುಂಬಿಕೊಂಡು ಬಂದು ರಸ್ತೆ ರಸ್ತೆಗಳಲ್ಲಿ ಮಾರುತ್ತಿರುವುದು ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>